ಹಾಸನ : ಅರಸೀಕೆರೆ ಮೂಲದ ಜ್ಯೋತಿಷ್ಯ ಶಾಸ್ರ್ತ ಹೇಳೋ ಅಖಿಲೇಶ್ ಎಂಬುವವರ ಬಳಿ ಫೊನ್ ಪೇ ಮಾಡಿಸಿಕೊಂಡಿದ್ದ ಅರಣ್ಯ ಸಂಚಾರಿ ದಳದ ಎಸಿಎಫ್ ಸತೀಶ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಮೊದಲು 5 ಸಾವಿರ ಫೊನ್ ಪೇ ನಂತರ ಹತ್ತು ಸಾವಿರ ಗೂಗಲ್ ಪೇ ಮಾಡಿಸಿಕೊಂಡಿದ್ದು ಕೇಸ್ ಒಂದರಲ್ಲಿ ಅನೂಕೂಲ ಮಾಡಿಕೊಡುತ್ತೇನೆ ಎಂದು ಹೇಳಿ ಗೂಗಲ್ ಪೇ ಅರಣ್ಯ ಇಲಾಖೆ ಅಧಿಕಾರಿ ಮಾಡಿಸಿಕೊಂಡಿದ್ದರು.
ಅರಣ್ಯ ಸಂಚಾರಿ ದಳದ ಎಸಿಎಫ್ ಸತೀಶ್ ಲೋಕಾಯುಕ್ತ ಬಲೆಗೆ ಭೃಷ್ಟ ಅಧಿಕಾರಿ.ವನ್ಯ ಜೀವಿ ಅಪರಾಧದ ಕೇಸ್ ವೊಂದರಲ್ಲಿ ಹಣ ಪಡೆದ ಆರೋಪದ ಹಿನ್ನೆಲೆ ರಾತ್ರೋ ರಾತ್ರಿ ಪ್ರವಾಸಿ ಮಂದಿರದಲ್ಲಿದ್ದ ಎಸಿಎಫ್ ಸತೀಶ್ ರನ್ನು ಲೋಕಯುಕ್ತ ತಡರಾತ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಾಸನದ ಗೆಂಡೆಕಟ್ಟೆ ಅರಣ್ಯ ಪ್ರದೇಶದಲ್ಲಿ ಪ್ರವಾಸಿ ಮಂದಿರದಲ್ಲಿ ಉಳಿದಿದ್ದ ಅರಣ್ಯ ಸಂಚಾರಿ ದಳದ ಎಸಿಎಫ್ ಸತೀಶ್ ರವರು ಕರ್ತವ್ಯ ನಿರ್ವಹಿಸುತ್ತಿದ್ದು ವಶಕ್ಕೆ ಪಡೆದು ಕಳೆದ ರಾತ್ರಿಯಿಂದ ತನಿಖೆ ಚುರುಕುಗೊಳಿಸಿದ್ದಾರೆ.


