Monday, November 3, 2025
Flats for sale
Homeರಾಜ್ಯಚಿಕ್ಕಮಗಳೂರು ; ನಾಳೆ ಹಸೆಮನೆ ಏರಬೇಕಿದ್ದ ಮದುಮಗಳು ಹೃದಯಾಘಾತದಿಂದ ಸಾವು…!

ಚಿಕ್ಕಮಗಳೂರು ; ನಾಳೆ ಹಸೆಮನೆ ಏರಬೇಕಿದ್ದ ಮದುಮಗಳು ಹೃದಯಾಘಾತದಿಂದ ಸಾವು…!

ಚಿಕ್ಕಮಗಳೂರು : ಕೊರೊನಾ ಲಸಿಕೆ ಪಡೆದ ನಂತದ ಯುವಕ ಯುವತಿಯರು ಹೃದಯಾಘಾತ ಕ್ಕೆ ಬಲಿಯಾಗುತ್ತಾ ಇದ್ದಾರೆ. ಆದರೆ ಯಾವ ಸರಕಾರ ಕೂಡ ಈ ಬಗ್ಗೆ ತಲೆಕೆಡಿಸಿಸಿ ಕೊಳ್ಳಲಿಲ್ಲ,ಇದೀಗ ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದ್ದು, ಮದುವೆಗೆ ಮುನ್ನ ದಿನವೇ ಕುಸಿದುಬಿದ್ದು ಹೃದಯಾಘಾತದಿಂದ ನವವಧು ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ಮೃತ ಯುವತಿಯನ್ನು ಶೃತಿ (32) ಎಂದು ತಿಳಿದುಬಂದಿದೆ. ತರೀಕೆರೆಯ ದಿಲೀಪ್ ಜೊತೆ ನಾಳೆ ಶೃತಿ ವಿವಾಹ ತರೀಕೆರೆ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಮದುವೆ ನಡೆಯಬೇಕಾಗಿತ್ತು. ಆದರೆ ಇಂದು ಮನೆಯಲ್ಲಿದ್ದಾಗಲೇ ವಧು ಶೃತಿ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

ಚಿಕ್ಕಮಗಳೂರು ಜಿಲ್ಲೆಯ ಅಂಜಪುರ ತಾಲೂಕಿನ ಸೊಲ್ಲಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ನಾಳೆ ಮದುವೆ ಸಿದ್ಧತೆಯಲ್ಲಿದ್ದ ವಧು ಇದ್ದಕ್ಕಿದ್ದಂತೆ ಹೃದಯಾಘಾತಕ್ಕೆ ಬಲಿಯಾಗಿದ್ದಾಳೆ.

RELATED ARTICLES

LEAVE A REPLY

Please enter your comment!
Please enter your name here

Most Popular