Thursday, September 18, 2025
Flats for sale
Homeರಾಜ್ಯಚಾಮರಾಜನಗರ ; ಮಹದೇಶ್ವರ ಬೆಟ್ಟ ರಸ್ತೆಯಲ್ಲಿ ಟಿಪ್ಪರ್ - ಕಾರ್ ನಡುವೆ ಭೀಕರ ಅಪಘಾತ,ಐವರು ಸ್ಥಳದಲ್ಲೇ...

ಚಾಮರಾಜನಗರ ; ಮಹದೇಶ್ವರ ಬೆಟ್ಟ ರಸ್ತೆಯಲ್ಲಿ ಟಿಪ್ಪರ್ – ಕಾರ್ ನಡುವೆ ಭೀಕರ ಅಪಘಾತ,ಐವರು ಸ್ಥಳದಲ್ಲೇ ಸಾವು..!

ಚಾಮರಾಜನಗರ ; ಟಿಪ್ಪರ್ – ಕಾರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರ್‌ನಲ್ಲಿದ್ದ ಐವರು ಸ್ಥಳದಲ್ಲೇ ಸಾವನಪ್ಪಿದ ಘಟನೆ ಮಹದೇಶ್ವರ ಬೆಟ್ಟದ ಚಿಕ್ಕಿಂದುವಾಡಿ ಬಳಿ ನಡೆಸಿದೆ.

ಮೈಸೂರು ಮೂಲದ ನಿಖಿತ, ಶ್ರೀಲಕ್ಷ್ಮಿ ಮಂಡ್ಯ ಮೂಲದ ಸುಹಾಸ್, ಶ್ರೇಯಸ್ ಅಲಿಯಾಸ್ ಶೆಟ್ಟಿ, ನಿತಿನ್ ಮೃತ ದುರ್ದೈವಿಗಳು.

ಅಪಘಾತದಲ್ಲಿ ಮೃತಪಟ್ಟ ಐವರೂ ಕಾಲೇಜು ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ. ನಾಲ್ವರು ಇಂಜಿನಿಯರಿಂಗ್​ ವಿದ್ಯಾರ್ಥಿಗಳು, ಓರ್ವ ಡಿಪ್ಲೊಮಾ ವಿದ್ಯಾರ್ಥಿಯಾಗಿದ್ದಾರೆ. ಮೃತರು ಮೈಸೂರಿನ ಎಂಐಟಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ಶಿವರಾತ್ರಿ ಜಾತ್ರೆಗೆಂದು ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ ಟಿಪ್ಪರ್​ ಡಿಕ್ಕಿಯಾದ ರಭಸಕ್ಕೆ ರಸ್ತೆ ಪಕ್ಕಕ್ಕೆ ಕಾರು ಉರುಳಿಬಿದ್ದಿದೆ. ಕಾರು ಕೊಳ್ಳೇಗಾಲದಿಂದ ಮಹದೇಶ್ವರ ಬೆಟ್ಟದ ಕಡೆಗೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದು ಮೃತದೇಹಗಳನ್ನು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular