Thursday, July 23, 2026
Homeರಾಜ್ಯಗೋಕಾಕ : ಕಾಂಗ್ರೆಸ್ ನಾಯಕರು ರಾಷ್ಟ್ರ ಚುನಾವಣೆಯಲ್ಲ, ರಾಜ್ಯ ಚುನಾವಣೆ ಎನ್ನುವ ರೀತಿ ವರ್ತಿಸುತ್ತಿದ್ದಾರೆ. :...

ಗೋಕಾಕ : ಕಾಂಗ್ರೆಸ್ ನಾಯಕರು ರಾಷ್ಟ್ರ ಚುನಾವಣೆಯಲ್ಲ, ರಾಜ್ಯ ಚುನಾವಣೆ ಎನ್ನುವ ರೀತಿ ವರ್ತಿಸುತ್ತಿದ್ದಾರೆ. : ಶಾಸಕ ರಮೇಶ ಜಾರಕಿಹೋಳಿ.

ಗೋಕಾಕ : ಗೋಕಾಕ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಬಿಜೆಪಿ ಪರ ರೋಡ ಶೋ ನಂತರ ಬೃಹತ್ ಸಮಾವೇಶದಲ್ಲಿ ಶಾಸಕ ರಮೇಶ ಜಾರಕಿಹೋಳಿ ಭಾಷಣ ಮಾಡಿ

ಕಾಂಗ್ರೆಸ್ ನಾಯಕರು ರಾಷ್ಟ್ರ ಚುನಾವಣೆಯಲ್ಲ, ರಾಜ್ಯ ಚುನಾವಣೆ ಎನ್ನುವ ರೀತಿ ವರ್ತಿಸುತ್ತಿದ್ದಾರೆ.ರಾಷ್ಟ್ರದ ಲ್ಲಿ 50ಕ್ಕೂ ಕಡಿಮೆ ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲಲ್ಲಿದೆ, ಹಾಗಿರುವಾಗ ರಾಹುಲ್ ಗಾಂಧಿ ಹೇಗೆ ಪ್ರಧಾನಿಯಾಗಲು ಸಾಧ್ಯ? ಭಾರತದ ಭದ್ರತೆಗಾಗಿ, ರಾಷ್ಟ್ರ ನಾಯಕರಾಗಿರುವ ಮೋದಿ ಪ್ರಧಾನಿ ಮಾಡಲು ಓಟ ಮಾಡಿ ಎಂದರು.

ಇನ್ನು ಇಂದಿರಾ ಗಾಂಧಿವರ ಕಾಂಗ್ರೆಸ್ ಗೂ ಇಂದಿನ ಕಾಂಗ್ರೆಸ್ ಪಕ್ಷಕ್ಕೂ ವ್ಯತ್ಯಾಸ ಇದೆ ಇಂದಿನ ಕಾಂಗ್ರೆಸ್ ಸತ್ತು ಹೋಗಿದೆಇಂದಿರಾ ಗಾಂಧಿ ಕಾಲದಲ್ಲಿನ ಕಾಂಗ್ರೆಸ್ ನೀತಿ, ಇಂದಿನ ಕಾಂಗ್ರೆಸ್ ನೀತಿಗೆ ವ್ಯತ್ಯಾಸ ಇದೆ,ಈಗ ಸ್ವಾರ್ಥ, ಭ್ಯಾಗ ಹಿಡಿಯುವವರು, ಮನೆ ಬಾಗಿಲು ಕಾಯುವವರೇ ನಾಯಕರೇ ರಾಷ್ಟ್ರ ನಾಯಕರಾಗಿದ್ದಾರೆ,ಕರ್ನಾಟಕದ ಒಬ್ಬ ನಾಯಕ ಕಾಂಗ್ರೆಸ್ ಪಕ್ಷ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ

ಕಾಂಗ್ರೆಸ್ ನಾಯಕತ್ವವಿಲ್ಲದೇ ಭವಿಷ್ಯ ಇಲ್ಲದಂತಾಗಿದೆ ,ಜಗದೀಶ್ ಶೆಟ್ಟರ್ ಆಯ್ಕೆಯಾಗಿ ಕೇಂದ್ರದಲ್ಲಿ ಮಂತ್ರಿಯಾಗಲ್ಲಿದ್ದಾರೆ ಜಗದೀಶ್ ಶೆಟ್ಟರ್ ಗೆ ಗೋಕಾಕ್ ತಾಲೂಕಿನಿಂದ ಒಂದು ಲಕ್ಷ ಲೀಡ್ ಕೊಡುವ ಸಂಕಲ್ಪ ಮಾಡಿದ್ದೇವೆ.ಕಾಂಗ್ರೆಸ್ ಆಸೆಗೆ ಬಲಿಯಾಗಬೇಡಿ ಎಂದರು.

RELATED ARTICLES

LEAVE A REPLY

Please enter your comment!
Please enter your name here

Most Popular