Sunday, June 1, 2025
Flats for sale
Homeರಾಜ್ಯಹುಬ್ಬಳ್ಳಿ /ಧಾರವಾಡ : ಮಸೀದಿಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಓಡಾಟ ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ಇಲಾಖೆಗೆ ಪತ್ರ,ಪ್ರತಿಕ್ರಿಯೆ ಇಲ್ಲದ...

ಹುಬ್ಬಳ್ಳಿ /ಧಾರವಾಡ : ಮಸೀದಿಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಓಡಾಟ ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ಇಲಾಖೆಗೆ ಪತ್ರ,ಪ್ರತಿಕ್ರಿಯೆ ಇಲ್ಲದ ಹಿನ್ನೆಲೆ ಪೊಲೀಸ್ ಕಮಿಷನರ್ ನಡೆಗೆ ಶಾಸಕ ಬೆಲ್ಲದ ಆಕ್ರೋಶ..!

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ನಗರದ ಕೆಲ ಮಸೀದಿಯಲ್ಲಿ ಬೇರೆ ದೇಶಗಳ ವ್ಯಕ್ತಿಗಳು ಓಡಾಟ ನಡೆಸುತ್ತಿದ್ದು, ಇದನ್ನು ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ಶಾಸಕ ಅರವಿಂದ್‌ಬೆಲ್ಲದ್ ಒತ್ತಾಯಿಸಿದ್ದಾರೆ. ಈ ಬಗ್ಗೆ ಶಾಸಕ ಅರವಿಂದ್‌ಬೆಲ್ಲದ ಅವರು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರಿಗೆ ಪತ್ರ ಬರೆದಿದ್ದು,
ಅವಳಿ ನಗರದ ಕೆಲ ಮಸೀದಿಗಳಲ್ಲಿ ಅಪರಿಚಿತರ ಓಡಾಟ ಕಂಡು ಬರುತ್ತಿದೆ. ಇವರುಗಳು ಸ್ಥಳೀಯರಲ್ಲ ಎಂಬ ಸಂಶಯವೂ ಇದ್ದು, ಈ ಬಗ್ಗೆ ಪರಿಶೀಲಿಸುವಂತೆ ಅವರು ಒತ್ತಾಯಿಸಿದ್ದಾರೆ. ಈ ಅಪರಿಚಿತ ವ್ಯಕ್ತಿಗಳು ಬೇರೆ ದೇಶದ ಪ್ರಜೆಗಳಂತೆ ಕಾಣುತ್ತಿದ್ದು, ಕೂಡಲೇ ಪೊಲೀಸರು ಜಾಗೃತರಾಗಿ ಮಸೀದಿಗಳಲ್ಲಿ ಓಡಾಡುತ್ತಿರುವ ಅಪರಿಚಿತರನ್ನು ವಿಚಾರಿಸಿ ಸೂಕ್ತ ಕ್ರಮ ಜರುಗಿಸಿ ಶಹರದಲ್ಲಿ ಯಾವುದೇ ಅಹಿತಕರ ಘಟನೆಯಾಗದಂತೆ ಕಟ್ಟೆಚ್ಚರಿಕೆ ವಹಿಸಬೇಕು ಎಂದು ಅರವಿAದ್‌ಬೆಲ್ಲದ್ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಈ ಹಿನ್ನೆಲೆ ಅಂತವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗೃಹ ಸಚಿವರಿಗೆ ಹಾಗೂ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ವಿಚಾರವಾಗಿ ಧಾರವಾಡದಲ್ಲಿ ಶಾಸಕ ಅರವಿಂದ ಬೆಲ್ಲದ ಮಾತನಾಡಿದ್ದಾರೆ. ಅಪರಿಚಿತ ವ್ಯಕ್ತಿಗಳ ಬಗ್ಗೆ ಪರಿಶೀಲಿಸುವಂತೆ ನಾನು ಪತ್ರ ಬರೆದಿದ್ದೇನೆ. ಕೆಲವು ಜಾಗೃತ ನಾಗರಿಕರು ನನಗೆ ಕರೆ ಮಾಡಿದ್ದಾರೆ. ಹೊರಗಿನ ಜನ ಅವಳಿನಗರಗಳಲ್ಲಿ ಓಡಾಡುತ್ತಿದಾರೆ ಎಂದು ಹೇಳಿದ್ದಾರೆ. ಯಾವ ರೀತಿ ಇದ್ದಾರೆ ಎಂದು ಕೇಳಿದಾಗ ಅವರು ಬೇರೆ ರೀತಿಯ ಜನ ಇದ್ದಾರೆ ಎಂದು ಹೇಳಿದ್ದಾರೆ. ಬಾಂಗ್ಲಾದೇಶದ ಜನರ ರೀತಿ ಇದ್ದಾರಾ ಎಂದು ಪ್ರಶ್ನಿಸಿದರೆ, ಅವರು, ಪಾಕಿಸ್ತಾನ ಜನರ ರೀತಿ ಇದ್ದಾರೆ ಎಂದು ಹೇಳಿದ್ದಾರೆ ಎಂದರು.

ಹೀಗಾಗಿ ನಾನು ಆಯುಕ್ತರಿಗೆ ಕಾಲ್ ಮಾಡಿ ಹೇಳಿದ್ದೇನೆ. ಅಷ್ಟೇ ಅಲ್ಲದೆ ಆಯಕ್ತರಿಗೆ ಹಾಗೂ ಗೃಹ ಮಂತ್ರಿಗೆ ಪತ್ರ ಬರೆದಿದ್ದೇನೆ. ಇದು ಸೂಕ್ಷ್ಮ ವಿಚಾರವಾಗಿದ್ದಕ್ಕೆ ಯಾವ ಪತ್ರಿಕೆಗೆ ಹಾಗೂ ಮೀಡಿಯಾಗೆ ಹೇಳಿಕೆ ನೀಡಿರಲಿಲ್ಲ, ಅವರ ತನಿಖೆಗೆ ಅನೂಕೂಲವಾಗಲೆಂದು ನಾನು ಹೇಳಿಲ್ಲ, ಆದರೆ ಎಂಟು ದಿನ ಆದರೂ ಯಾವುದೇ ವಿಚಾರಣೆ ಆಗಿಲ್ಲ ಎಂದರು.

ಪೊಲೀಸ್ ಕಮೀಷನರ್ ಪತ್ರದ ಬಗ್ಗೆ ಮಾಹಿತಿ ಇಲ್ಲಾ ಎಂದು ಹೇಳುತ್ತಿದ್ದಾರೆ, ಇದೊಂದು ಬೇಜವಾಬ್ದಾರಿ ಹೇಳಿಕೆ. ಇಷ್ಟೊಂದು ಸೀರಿಯಸ್ ಅಲಿಗೇಷನ್ ಮಾಡಿದಗಲೂ ಏನಾಗಿದೆ ಎಂದು ಪೊಲೀಸ್ ಕಮೀಷನರ್ ಕೇಳಿಲ್ಲ. ಆ ಕುರಿತ ವಿಚಾರಣೆ ಮಾಡಬೇಕೆನ್ನುವ ಮನಸ್ಥಿತಿ ಕೂಡ ಇಲ್ಲ. ಇದು ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ ಎಂದರು.

ಆಯುಕ್ತರಿಗೆ ಅಷ್ಟೇ ಅಲ್ಲ ನಾನು ಗೃಹ ಮಂತ್ರಿಗಳಿಗೂ ಪತ್ರ ಬರೆದಿದ್ದೇನೆ. ಈ ಸರ್ಕಾರದ ಮೇಲಿನವರು ದೇಶಘಾತುಕ ಶಕ್ತಿಗಳಿಗೆ ನಮ್ಮ ಬ್ರದರ್ಸ್‌ ಎಂದು ಹೇಳುತ್ತಿದ್ದಾರೆ. ಕೇಳಗಿನವರು ಕೂಡ ಅವರ ಹಾಗೆಯೇ ಅನುಕರಣೆ ಮಾಡುತ್ತಿದ್ದಾರೆ ಎಂದರು. ಅವಳಿನಗರದಲ್ಲಿ ಏಳರಿಂದ ಎಂಟು ಜನ ಗುಂಪಾಗಿ ಓಡಾಡುತ್ತಿದ್ದಾರೆ. ಅವರ ಆ್ಯಕ್ಟಿವಿಟಿ ಏನು ಗೊತ್ತಿಲ್ಲ. ಪ್ರತಿದಿನ ಬೆಳಿಗ್ಗೆ ಅಲ್ಲಿ ನಮಾಜ್ನ ಟೈಮ್‌ಗೆ ಬರುತ್ತಾರೆ ಎಂದು ಜನ ಹೇಳಿದ್ದಾರೆ. ಇದರ ಬಗ್ಗೆ ಪೊಲೀಸರ ಕ್ರಮ ಆಗಿಲ್ಲ. ಪೋಲಿಸರು ಬರೀ ಕಲೆಕ್ಷನ್ ಧಂದೆಯಲ್ಲಿ ಬ್ಯುಸಿಯಾಗಿದ್ದಾರೆ ಎಂದು ಬೆಲ್ಲದ ಕಿಡಿಕಾರಿದರು.

RELATED ARTICLES

LEAVE A REPLY

Please enter your comment!
Please enter your name here

Most Popular