Thursday, March 12, 2026
Flats for sale
Homeರಾಜ್ಯಹಾಸನ ; ಸಿದ್ದರಾಮಯ್ಯ ಅವರು ಹಾಲಿನಷ್ಟೇ ಪರಿಶುದ್ಧ : ಸಂಸದ ಶ್ರೇಯಸ್ ಪಟೇಲ್.

ಹಾಸನ ; ಸಿದ್ದರಾಮಯ್ಯ ಅವರು ಹಾಲಿನಷ್ಟೇ ಪರಿಶುದ್ಧ : ಸಂಸದ ಶ್ರೇಯಸ್ ಪಟೇಲ್.

ಹಾಸನ : ಸಿಎಂ ಸಿದ್ದರಾಮಯ್ಯ ಅವರ ಮೇಲೆ ಬಂದಿರುವ ಆರೋಪ ಸತ್ಯಕ್ಕೆ ದೂರ ಅವರು ಹಾಲಿನಷ್ಟೇ ಪರಿಶುದ್ಧವಾಗಿದ್ದು ಆರೋಪದಿಂದ ವಿಮುಕ್ತರಾಗಿ ಅತಿಶೀಘ್ರವಾಗಿ ಹೊರಬರಲಿದ್ದಾರೆ ಎಂದು ಸಂಸದ ಶ್ರೇಯಸ್ ಪಟೇಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸುಳ್ಳು ಯಾವತ್ತಿದ್ದರೂ ಸುಳ್ಳಾಗೇ ಉಳಿಯುತ್ತದೆ ಕೊನೆಗೆ ಉಳಿಯುವುದು ಸತ್ಯ ಮಾತ್ರ ಉಚ್ಚ ನ್ಯಾಯಾಲಯ ಕೊಟ್ಟಿರುವ ತೀರ್ಪಿಗೆ ನಾವೆಲ್ಲರೂ ಬದ್ಧರಾಗಿದ್ದೇವೆ ಆದರೆ ರಾಜ್ಯ ದೇಶದ ಜನರಿಗೆ ಸಿದ್ದರಾಮಯ್ಯ ಅವರು ಆರೋಪದಿಂದ ಮುಕ್ತರಾಗಿ ಹೊರಬರುತ್ತಾರೆ ಎಂಬ ಭರವಸೆ ಇದೆ ಎಂದರು

ಅವರ ವಿರುದ್ಧ ಯಾವುದೇ ರೀತಿಯ ತನಿಖೆ ಮಾಡಿದರೂ ತಪ್ಪಿತಸ್ಥರಾಗಲು ಸಾಧ್ಯವಿಲ್ಲ ಎಂದ ಅವರು, ಸಿದ್ದರಾಮಯ್ಯ ಅವರು ಯಾವ ಕಾರಣಕ್ಕೆ ರಾಜೀನಾಮೆ ಕೊಡಬೇಕು. ವಿಪಕ್ಷದವರು ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ಅದನ್ನು ಸರಿ ಮಾಡಿಕೊಳ್ಳುವ ಬದಲಾಗಿ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುವ ನೈತಿಕತೆ ಇಲ್ಲ ಎಂದರು.

ಬಿಜೆಪಿ ಜೆಡಿಎಸ್ ನವರು ಇಲ್ಲಿಯವರೆಗೆ ಎಷ್ಟು ಹಗರಣ ಮಾಡಿಲ್ಲ, ಎಷ್ಟು ಹಗರಣದಲ್ಲಿ ಭಾಗಿಯಾಗಿಲ್ಲ ಹಾಗಿದ್ದರೆ ಎಷ್ಟು ಮುಖ್ಯಮಂತ್ರಿಗಳು ಇಲ್ಲಿಯವರೆಗೂ ರಾಜೀನಾಮೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದವರು. ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವ ಪ್ರಮೇಯ ಬರುವುದಿಲ್ಲ. ಶಾಸಕರು ಸಂಸದರು ನಾವೆಲ್ಲರೂ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಲ್ಲುತ್ತೇವೆ ಎಂದರು

RELATED ARTICLES

LEAVE A REPLY

Please enter your comment!
Please enter your name here

Most Popular