ಶಿಗ್ಗಾವಿ: ನಗರದಲ್ಲಿ ಇಂದು ಎಬಿವಿಪಿ ವತಿಯಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬೃಹತ್ ತಿರಂಗಾ ಯಾತ್ರೆಯನ್ನ ಹಮ್ಮಿಕೊಳ್ಳಲಾಯಿತ್ತು.
ಪಟ್ಟಣದ ಗಂಗೆಬಾವಿ ಕ್ರಾಸ್ ನಲ್ಲಿ 100 ಮೀಟರ್ ನ ತಿರಂಗಾ ಯಾತ್ರೆಗೆ ಭಾರತಾಂಬೆ ಪೂಜೆ ಸಲ್ಲಿಸುವ ಮೂಲಕ ಗಂಜೀಗಟ್ಟಿ ಮಠದ ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯರು ಚಾಲನೆ ನೀಡಿದರು.
ತಿರಂಗಾ ಯಾತ್ರೆಯು ಗಂಗೇಬಾವಿ ಕ್ರಾಸ್ ನಿಂದ ಹಳೆಬಸ್ ನಿಲ್ದಾಣ, ಚನ್ನಮ್ಮ ಸರ್ಕಲ್ ಮೂಲಕ ಹಳೆಪ್ಯಾಟ್ ಓಣಿಯಿಂದ ಹಾಯ್ದು ತಾಲೂಕಾ ಕ್ರೀಡಾಂಗಣ ತಲುಪಿತು.
ಯುವ ಮುಖಂಡ ಪ್ರತೀಕ ಕೋಳೆಕಾರ, ಶಂಕರ್ ಕುಂದಗೋಳ. ಜಿಲ್ಲಾ ಪ್ರಮುಖ. ಕಿರಣ ಕಮ್ಮಾರ. ಜಿಲ್ಲಾ ಸಹ ಸಂಚಾಲಕ. ಶಿವಾನಂದ ದೊಡ್ಡಮನಿ. ಗಂಗಾಧರ ಕುಲಕರ್ಣಿ. ಬಸವರಾಜ್ ಕಲಪ್ಪನವರ. ಗಣೇಶ್ ಕಂಮಡೂಳ್ಳಿ.ಅನುಶಾ ಮುದಿನಾಯಕ.ವಿನಾ ಚಿಕ್ಕಗೌಡ್ರ. ವಿದ್ಯಾರ್ಥಿಗಳು ಸೇರಿದಂತೆ ಯುವಕರು ವಿವಿದ ಕಾಲೇಜಿನ ವಿದ್ಯಾರ್ಥಿಗಳು ಭಾಗಿಯಾಗಿದ್ದರು.


