ಮೈಸೂರು ; ಜೂನ್ 26 ರಂದು ಮಲೆ ಮಹದೇಶ್ವರ ಬೆಟ್ಟದಲ್ಲಿ (ಎಂಎಂ ಹಿಲ್ಸ್) ಸಾವನ್ನಪ್ಪಿದ ಐದು ಹುಲಿಗಳು ವಿಷಪ್ರಾಶನದಿಂದ ಬಲಿಯಾಗಿವೆ ಎಂದು ಪಶುವೈದ್ಯರು ದೃಢಪಡಿಸಿದ್ದಾರೆ. ತ್ವರಿತ ಪ್ರಗತಿಯಲ್ಲಿ, ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ್ದಾರೆ, ಇದು ಸೇಡಿನ ಕ್ರೂರ ಕೃತ್ಯ ಎಂದು ಬಹಿರಂಗಪಡಿಸಿದ್ದಾರೆ.
ಪಶುವೈದ್ಯಕೀಯ ವರದಿಗಳು ಎಲ್ಲಾ ಐದು ಹುಲಿಗಳ ಹೊಟ್ಟೆಯಲ್ಲಿ ಮತ್ತು ಹತ್ತಿರದಲ್ಲಿ ಕಂಡುಬಂದ ಒಂದು ಹೋರಿಯ ಮಾಂಸದಲ್ಲಿ ಅತ್ಯಂತ ವಿಷಕಾರಿ ಕೀಟನಾಶಕ ಸಂಯುಕ್ತವಾದ ಫೋರೇಟ್ ಇರುವುದನ್ನು ದೃಢಪಡಿಸಿವೆ. ಸ್ಥಳೀಯರು ಹೋರಿಯ ಮೃತದೇಹಕ್ಕೆ ಕೀಟನಾಶಕವನ್ನು ಲೇಪಿಸಿದ್ದರು ಎಂದು ನಂಬಲಾಗಿದೆ, ಇದು ಹುಲಿಗಳು ಸೇವಿಸಿದಾಗ ಮಾರಕವಾಗಿದೆ. ಸೇವಿಸಿದ ಕೆಲವೇ ಗಂಟೆಗಳಲ್ಲಿ ಮೃತಪಟ್ಟಿದೆ ಎಂದು ತಜ್ಞರು ಹೇಳುತ್ತಾರೆ.
ಮೂವರು ಆರೋಪಿಗಳನ್ನು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಜಿಎಂಎಫ್ಸಿ ಕೋರ್ಟ್ನ ನ್ಯಾಯಾಧೀಶೆ ನಿವಾಸದ ಮುಂದೆ ಶನಿವಾರ ಹಾಜರು ಪಡಿಸಲಾಯ್ತು. 3 ದಿನ ಅರಣ್ಯಾಧಿಕಾರಿಗಳ ಕಸ್ಟಡಿಗೆ ನೀಡಿ ನ್ಯಾಯಾಧೀಶೆ ಎಂ.ಕಾವ್ಯಶ್ರೀ ಆದೇಶಿಸಿದ್ದಾರೆ. ಅಧಿಕಾರಿಗಳ ತನಿಖೆಯಲ್ಲಿ ಮತ್ತಿನ್ಯಾವ ವಿಚಾರ ಹೊರಬೀಳುತ್ತದೆ ನೋಡಬೇಕಿದೆ.
ಪ್ರಾಣಿಗಳು ಬೇಟೆ ಆಡೋದು ಸರ್ವೇ ಸಾಮಾನ್ಯ.. ಜೀವವೈವಿಧ್ಯತೆ ಉಳಿಯುವಿಕೆಯಲ್ಲಿ ಈ ಬೇಟೆ ಕೂಡ ಮಹತ್ವದ್ದು.. ಆದ್ರೆ, ಚಾಮರಾಜನಗರದಲ್ಲಿ ಐವರ ಹುಲಿಗಳಿಗೆ ವಿಷವಿಕ್ಕಿದ್ದಕ್ಕೆ ಈ ಬೇಟೆಯೇ ಕಾರಣ ಅನ್ನೋದು ಗೊತ್ತಾಗಿದೆ.
ಆಗಿದ್ದೇನು?
ಜೂನ್ 23ರಂದು ಕೊಳ್ಳೇಗಾಲದ ಮೀಣ್ಯ ಅರಣ್ಯದಲ್ಲಿ, ಈ ಮಾದುರಾಜುವಿನ ಹಸುವನ್ನ ಹುಲಿ ಬೇಟೆ ಆಡಿತ್ತು. ತಾನು ತುಂಬ ಪ್ರೀತಿಸುತ್ತಿದ್ದ ಹಸುವನ್ನ, ಹುಲಿ ಕೊಂದಿದ್ದನ್ನ ನೋಡಿ ಮಾದುರಾಜು ಮನನೊಂದಿದ್ದ. ಹುಲಿಯ ಮೇಲೆ ಕೋಪಗೊಂಡಿದ್ದ. ಹಸುವನ್ನ ಬೇಟೆಯಾಡಿದ್ದ ಹುಲಿ ಮತ್ತೆ, ಹಸು ಮಾಂಸ ತಿನ್ನೋದಕ್ಕೆ ಬರುತ್ತೆ ಅಂತ ತಿಳಿದಿದ್ದ ಮಾದುರಾಜು, ಹಸುವಿನ ಶವಕ್ಕೆ ನಾಗರಾಜ್, ಕೋನಪ್ಪನ ಜತೆ ಸೇರಿ ಕ್ರಿಮಿನಾಶಕ ವಿಷ ಬೆರೆಸಿದ್ದ. ಹೀಗಾಗಿ, ವಿಷವಿಕ್ಕಿದ್ದ ಹಸುವಿನ ದೇಹವನ್ನ ತಿಂದಿದ್ರಿಂದಲೇ ಹುಲಿ ಮತ್ತು 4 ಮರಿಗಳು ಪ್ರಾಣಬಿಟ್ಟಿರುವುದು ಈಗಾಗಲೇ ಬಯಲಾಗಿದೆ.


