ಮೈಸೂರು : ನೀರಿನಲ್ಲಿ ಮುಳುಗಿ ಮೂವರು ಧಾರುಣ ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆ ಟಿ ನರಸೀಪುರ ತಾಲ್ಲೂಕಿನಲ್ಲಿ ನಡೆದಿದೆ.
ತಾತ ಹಾಗೂ ಇಬ್ಬರು ಮೊಮ್ಮಕ್ಕಳು ಜಲ ಸಮಾಧಿಯಾಗಿದ್ದು ಮೃತರನ್ನು ಚೌಡಯ್ಯ 70, ಭರತ್ 13, ಧನುಷ್ 10 ವರ್ಷ ಎಂದು ತಿಳಿದುಬಂದಿದೆ.
ಟಿ ನರಸೀಪುರ ಪಟ್ಟಣದ ತಿರುಮಕೂಡಲಿನ ನಿವಾಸಿಗಳಾ ಇವರು ಇಂದು ಕಾವೇರಿ ನದಿ ಬಳಿಗೆ ತೆರಳಿದ್ದ ವೇಳೆ ಘಟನೆ ನಡೆದಿದೆ. ಇಬ್ಬರು ಮೊಮ್ಮಕ್ಕಳು ನೀರಿನಲ್ಲಿ ಮುಳುಗಿದ್ದ ಹಿನ್ನೆಲೆ ಮಕ್ಕಳ ರಕ್ಷಣೆಗೆ ತಾತ ಚೌಡಯ್ಯ ತೆರಳಿದ್ದರು, ಇಬ್ಬರು ಮೊಮ್ಮಕ್ಕಳನ್ನ ರಕ್ಷಿಸಲಾಗದೆ ತಾವು ಸಾವನ್ನಪ್ಪಿರುವ ಮಾಹಿತಿ ದೊರೆತಿದೆ.
ಟಿ.ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ಮೃತ ದೇಹಗಳ ರವಾನಿಸಿದ್ದು
ಟಿ.ನರಸೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


