ಮೈಸೂರು : ಮೈಸೂರಿನಲ್ಲಿ ಕಾರ್ತಿಕ್ ಹತ್ಯೆ ಸಂಬಂಧಿಸಿದಂತೆ ಕೊಲೆಯಾದ ಬಳಿಕ 3 ತಂಡ ರಚನೆ ಮಾಡಿ ಆರೋಪಿಗಳ ವಶಕ್ಕೆ ಬಲೆ ಬಿಸಿದ್ದು ಆರೋಪಿಗಳು ಸಿಕ್ಕಿ ಅಪರಾಧ ಕೃತ್ಯ ಒಪ್ಪಿಕೊಂಡಿದ್ದು ಒಬ್ಬರು ಮಹಿಳೆ ಸೇರಿ 7 ಜನ ವಶಕ್ಕೆ ಪಡೆದಿದ್ದೇವೆ ಎಂದು ಎಸ್ಪಿ ವಿಷ್ಣುವರ್ಧನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಿ.ಎಂ ಸಿದ್ದರಾಮಯ್ಯ ಕ್ಷೇತ್ರ ವರುಣ ವ್ಯಾಪ್ತಿಯಲ್ಲಿ ಕಾರ್ತಿಕ್ ಕೊಲೆ ಆಗಿದ್ದು ಕಾರ್ತಿಕ್ ಮೂಲತಃ ಮೈಸೂರು ಮೂಲದ ವ್ಯಕ್ತಿಯಾಗಿದ್ದು ಈತನ ವಿರುದ್ಧ ರೌಡಿ ಶೀಟರ್ ಕೂಡ ಇದೆ ಎಂದು ತಿಳಿಸಿದ್ದಾರೆ.
ಮೊದಲು ದುಡ್ಡಿನ ವಿಚಾರಕ್ಕೆ ಕೊಲೆ ಆಗಿದೆ ಅಂತ ತನಿಖೆ ಮಾಡಿದ್ದು ಆದರೆ ಒಂದು ಮಹಿಳೆ ವಿಚಾರಕ್ಕೆ ಕೊಲೆ ಆಗಿದೆ ಅಂತ ತನಿಖೆ ಬಳಿಕ ಗೊತ್ತಾಗಿದೆ. ಕಾರ್ತಿಕ್ ಈ ಹಿಂದೆ ಪ್ರವೀಣ್ ಗೆ ಕೊಲೆ ಬೆದರಿಕೆ ಹಾಕಿದ್ದು ಈ ಹಿನ್ನಲೆ ಪ್ರವೀಣ್ ಗುಂಪು ಕಟ್ಟಿಕೊಂಡು ಕಾರ್ತಿಕ್ ಹತ್ಯೆ ಮಾಡಿದ್ದಾರೆ ಎಂದು ತನಿಖೆಯಲ್ಲಿ ತಿಳಿಸಿದ್ದಾರೆ.
ಪ್ರವೀಣ್ ಈ ಹಿಂದೆ ಕಾರ್ತಿಕ್ ಕಾರ್ ಡ್ರೈವರ್ ಆಗಿದ್ದು ಕೊಲೆಯಲ್ಲಿ ಮಹಿಳೆಯ ಕೈವಾಡವೂ ಇದೆ ಕಾರ್ತಿಕ್ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡುತ್ತಿದ್ದು ಕೊಲೆಯಲ್ಲಿ ಭಾಗಿಯಾಗಿರುವ ಎಲ್ಲರೂ ಕಾರ್ತಿಕ್ ಗೆ ಪರಿಚಯ ಇತ್ತು ಹೇಗೆ ಆತನನ್ನು ಟ್ರ್ಯಾಪ್ ಮಾಡಿದ್ರು ಪ್ಲಾನ್ ಹೇಗೆ ಮಾಡಿದ್ರು ಅಂತ ಸಂಪೂರ್ಣ ಮಾಹಿತಿ ತನಿಖೆ ಬಳಿಕ ತಿಳಿಸುತ್ತೇವೆ ಎಂದರು.
ಕಾರ್ತಿಕ್ ಜೊತೆ ಇವರೆಲ್ಲರಿಗೂ ಪರ್ಸನಲ್ ಎನಿಮಿಟಿ ಇತ್ತು. ಪ್ರವೀಣ್ ಗೆ ಕಾರ್ತಿಕ್ ನಿಂದ ಜೀವ ಭಯ ಇತ್ತು ಹೀಗಾಗಿ ಇವನನ್ನು ಬಿಟ್ರೆ ನನ್ನ ಮುಗಿಸುತ್ತಾನೆ ಅಂತ ಪ್ಲಾನ್ ಮಾಡಿ ಪ್ರವೀಣ್ ಗ್ಯಾಂಗ್ ಆತನನ್ನು ಮುಗಿಸಿದೆ ತನಿಖೆ ಹಂತದಲ್ಲಿರುವ ಕಾರಣ ಎಲ್ಲವನ್ನೂ ಈಗ ಹೇಳಲು ಸಾದ್ಯವಿಲ್ಲ ಮೈಸೂರಿನಲ್ಲಿ ಎಸ್ಪಿ ವಿಷ್ಣುವರ್ಧನ್ ತಿಳಿಸಿದ್ದಾರೆ.