ಮುಂಬೈ : ಭಾರತ- ಪಾಕಿಸ್ತಾನ ನಡುವಣ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳನ್ನು ಬಿಸಿಸಿಐ ಅನಿರ್ದಿಷ್ಟಾವಧಿಗೆ ರದ್ದುಪಡಿಸಿದೆ.
ಜಮ್ಮುವಿನ ಪಠಾಣ್ಕೋಟ್ನಲ್ಲಿ ವಾಯುದಾಳಿ ನಡೆದ ಹಿನ್ನೆಲೆಯಲ್ಲಿ ನಿನ್ನೆ ಧರ್ಮಶಾಲಾದಲ್ಲಿ ನಡೆದ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯವನ್ನು ಅರ್ಧಕ್ಕೆ ರದ್ದುಪಡಿಸಿದಬೆನ್ನಲ್ಲೆ ಐಪಿಎಲ್ನ ಉಳಿದ ಪಂದ್ಯಗಳನ್ನು ಅಮಾನತು ಮಾಡಲಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮAಡಳಿ ಇಂದು ತುರ್ತು ಸಭೆ ಸೇರಿ ಬಾಕಿ ಉಳಿದ ಪಂದ್ಯಗಳನ್ನು ಅನಿರ್ದಿಷ್ಟಾವಧಿಯವರೆಗೆ ರದ್ದು ಮಾಡುವ ತೀರ್ಮಾನ ಕೈಗೊಂಡಿದೆ. ಆಟಗಾರರ ಸುರಕ್ಷತೆ, ಕ್ರೀಡಾಂಗಣದ ನಿಯೋಜನೆಗೊAಡಿರುವ ಸಿಬ್ಬಂದಿ ಹಾಗೂ ಪ್ರೇಕ್ಷಕರ ಹಿತದೃಷ್ಟಿಯಿಂದ ಐಪಿಎಲ್ ಪಂದ್ಯಗಳನ್ನು ಅಮಾನತು ಮಾಡಲಾಗಿದೆ.
ಸೂಕ್ತ ಸಮಯದಲ್ಲಿ ಉಳಿದ ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ಇಡೀ ದೇಶದಲ್ಲೇ ಯುದ್ಧದ ವಾತಾವರಣ ಉಂಟಾಗಿರುವಾಗ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಐಪಿಎಲ್ ಪಂದ್ಯಗಳನ್ನು ಆಡುವುದು ಉಚಿತವಲ್ಲ ಎಂದು ಬಿಸಿಸಿಐ ಅಭಿಪ್ರಾಯ ಪಟ್ಟಿದೆ.ಕ್ರಿಕೆಟ್ ಆಡುವ ರಾಷ್ಟçಗಳ ಕ್ರಿಕೆಟ್ ಮಂಡಳಿಗಳಿAದ ಬAದಿರುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಐಪಿಎಲ್ ಪ್ರಾಂಚೈಸಿಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರು, ತರಬೇತುದಾರರು ಇದ್ದಾರೆ. ಅವರ ಸರಕ್ಷತಾ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. 12 ಲೀಗ್ ಪಂದ್ಯಗಳು, 4ನಾಕೌಟ್ ಪಂದ್ಯಗಳು ಹಾಗು ಕೊಲ್ಕತ್ತಾದಲ್ಲಿ ನಡೆಯಬೇಕಿದ್ದ ಐಪಿಎಲ್ನ ಫೈನಲ್ ಪಂದ್ಯಗಳಷ್ಟೇ ಬಾಕಿ ಉಳಿದಿದ್ದವು.
ಆತಿಥೇಯ ಲಖನೌ ಸೂಪರ್ಜೈನ್ಸ್ ಹಾಗೂ ರಾಯಲ್ಚಾಲೆಂರ್ಸ್ ಬೆಂಗಳೂರು ಆರ್ಸಿಬಿ ನಡುವಣ ಪಂದ್ಯ ಇಂದು ಲಖನೌದಲ್ಲಿ ರಾತ್ರಿ ನಡೆಯಬೇಕಾಗಿತ್ತು. ದೇಶದ 13 ನಗರಗಳಲ್ಲಿ ನಡೆಯುತ್ತಿದ್ದ ಈ ಬಾರಿಯ ಐಪಿಎಲ್ ಆವೃತ್ತಿಯು ಮಾ. 22 ರಿಂದ ಆರAಭವಾಗಿತು.