ಮಂಗಳೂರು : ಮಂಗಳೂರು ನಗರದಲ್ಲಿ ಅಂಬರ್ಗ್ರಿಸ್ (ತಿಮಿಂಗಿಲ ವಾಂತಿ) ಹೊಂದಿದ್ದ ಆರೋಪದ ಮೇಲೆ ಮೂವರನ್ನು ನಗರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಶನಿವಾರ ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳು ಪಂಪ್ವೆಲ್ ಬಳಿ ದಾಳಿ ನಡೆಸಿ, ವಿಟ್ಲದ ಮಂಗಳಿಪದವು ನಿವಾಸಿ ಚಿಕ್ಕಮಂಗಳೂರು ನಿವಾಸಿ ಶೇಟು (37) ವಿಟ್ಲದ ಮಂಗಳಿಪದವು ನಿವಾಸಿ ಬದ್ರುದ್ದೀನ್ (28); ಮತ್ತು ತಮಿಳುನಾಡಿನ ನಾಗಪಟ್ಟಣಂ ಮೂಲದ ರಾಜೇಶ್ ಆರ್ (22).ಎಂಬವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಶಪಡಿಸಿಕೊಳ್ಳಲಾದ ತಿಮಿಂಗಿಲ ವಾಂತಿ 1.575 ಕೆಜಿ ತೂಕವಿದ್ದು, ಮಾರುಕಟ್ಟೆ ಮೌಲ್ಯ ರೂ. 1.57 ಕೋಟಿ. ಹೆಚ್ಚುವರಿಯಾಗಿ,ಬಂಧಿತರಿಂದ 5 ಲಕ್ಷ ರೂ. ರೂ. ಮೌಲ್ಯದ ಕಾರು ಮತ್ತು ಮೊಬೈಲ್ ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.


