ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಹೊನ್ನಕಟ್ಟೆ – ಕಾನಾ ರಸ್ತೆಯ ರೈಲ್ವೆ ಮೇಲ್ಸೇತುವೆಯಲ್ಲಿ ಕಾಂಕ್ರೀಟೀಕರಣ ಕೈಗೆತ್ತಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಸೇತುವೆಯಲ್ಲಿ ಎಲ್ಲಾ ರೀತಿಯ ವಾಹನ ಸಂಚಾರವನ್ನು ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 16 ರವರೆಗೆ ಒಟ್ಟು 30 ದಿನಗಳ ಕಾಲ ಸಂಪೂರ್ಣ ಸಂಚಾರ ನಿರ್ಬಂಧಿಸಲಾಗಿದೆ.
ಈ ಅವಧಿಯಲ್ಲಿ ವಾಹನಗಳು 1.ಮಂಗಳೂರಿನಿಂದ ಕುಳಾಯಿ ಹೊನ್ನಕಟ್ಟೆ ಮೂಲಕ ಎಂ.ಆರ್.ಪಿ.ಎಲ್ (ಒಖPಐ) ಕಡೆಗೆ ಸಂಚರಿಸುವ ವಾಹನಗಳು ಹೊಸಬೆಟ್ಟು- ಸುರತ್ಕಲ್ ಜಂಕ್ಷನ್ ಮುಖಾಂತರವಾಗಿ ಎಂ.ಆರ್.ಪಿ.ಎಲ್ ಕಡೆಗೆ ಸಂಚರಿಸಬೇಕು. ಎಂ.ಆರ್.ಪಿ.ಎಲ್ನಿಂದ ಮಂಗಳೂರು ಕಡೆಗೆ ಸಂಚರಿಸುವ ವಾಹನಗಳು ಎಂ.ಆರ್.ಪಿ.ಎಲ್ – ಸುರತ್ಕಲ್ ಜಂಕ್ಷನ್ಗೆ ಬಂದು ಎನ್.ಹೆಚ್- 66 ಸರ್ವಿಸ್ ರಸ್ತೆಯಲ್ಲಿ ಗೋವಿಂದಾಸ್ ಮುಖಾಂತರ ಮಂಗಳೂರು ಕಡೆಗೆ ಸಂಚರಿಸಬೇಕು ಎಂದು ತಿಳಿಸಿದ್ದಾರೆ.
ಸುರತ್ಕಲ್-ಗೋವಿಂದದಾಸ್ ಸರ್ವಿಸ್ ರಸ್ತೆಯಲ್ಲಿ ವಾಹನಗಳ ನಿಲುಗಡೆ ನಿರ್ಬಂಧಿಸಿದ್ದು ಸುರತ್ಕಲ್-ಗೋವಿಂದದಾಸ್ ಸರ್ವಿಸ್ ರಸ್ತೆಯಲ್ಲಿ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡುವ ಸಲುವಾಗಿ ಗೋವಿಂದದಾಸ್ ಕಡೆಯಿಂದ ಸುರತ್ಕಲ್ ಕಡೆ ಸರ್ವಿಸ್ ರಸ್ತೆಯಲ್ಲಿ ವಾಹನ ಸಂಚಾರಗಳ ನಿರ್ಬಂಧಿಸಿದೆ. ಸಂಚಾರ ದಟ್ಟನೆ ಸಮಯದಲ್ಲಿ ಎಂ.ಆರ್.ಪಿ.ಎಲ್, ಹೆಚ್.ಪಿ.ಎಸ್.ಎಲ್, ಬಿ.ಎ.ಎಸ್.ಎಫ್ ಹಾಗೂ ಇತರ ಕಂಪನಿಗಳ ವಾಹನಗಳು ಸುರತ್ಕಲ್-ಗೋವಿಂದದಾಸ್ ಸರ್ವಿಸ್ ರಸ್ತೆಯಲ್ಲಿ ಬಾರದಂತೆ (ಬೆಳಿಗ್ಗೆ 8 ರಿಂದ 9 ಗಂಟೆ, ಸಂಜೆ 4 ರಿಂದ 6 ಗಂಟೆ)ನಿರ್ಬಂಧಿಸಿದೆ.
ವಾಹನ ಸವಾರರು ಮತ್ತು ಸಾರ್ವಜನಿಕರು ಈ ಬದಲಾವಣೆಗಳನ್ನು ಗಮನಿಸಿ ಸಹಕರಿಸಬೇಕು. ನಿಗದಿತ ಅವಧಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ ಎಂದು ಮಹಾನಗರಪಾಲಿಕೆ ಆಯುಕ್ತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.