ಮಂಗಳೂರು : ರಾಜ್ಯದ ನ್ಯಾಯಾಂಗ ಇತಿಹಾಸದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅನಿಲ್ ಜಾನ್ ಸಿಕ್ವೇರಾ 25ನೇ ವಯಸ್ಸಿನಲ್ಲೇ ಅತೀ ಚಿಕ್ಕ ವಯಸ್ಸಿನ ನ್ಯಾಯಾಧೀಶರಾಗಿ ಆಯ್ಕೆಯಾಗುವ ಮೂಲಕ ಹೆಗ್ಗಳಿಕೆಗೆ ಯುವಕ ಪಾತ್ರನಾಗಿದ್ದಾನೆ.
ಕರ್ನಾಟಕದ ನ್ಯಾಯಾಂಗ ಇತಿಹಾಸದಲ್ಲಿ ಹೊಸ ಅಧ್ಯಾಯವಾಗಿದ್ದು ಅನಿಲ್ ಜಾನ್ ಸಿಕ್ವೇರಾ ಪ್ರಿಲಿಮ್ಸ್, ಮೇನ್ಸ್ ಮತ್ತು ಸಂದರ್ಶನದಲ್ಲಿ ತೇರ್ಗಡೆಯಾಗಿರುವುದು ಗಮನಾರ್ಹ ಸಾಧನೆಯಾಗಿದೆ.
ಬಂಟ್ವಾಳ ತಾಲೂಕಿನ ಬರಿಮಾರಿನ ಕೃಷಿಕರಾದ ಎವರೆಸ್ಟ್ ಸಿಕ್ವೇರಾ ಮತ್ತು ಐವಿ ಸಿಕ್ವೇರಾ ದಂಪತಿಯ ಮೂವರು ಮಕ್ಕಳಲ್ಲಿ ಕಿರಿಯವರಾಗಿರುವ ಅನಿಲ್ ಸಿಕ್ವೇರಾ ಅನಿಲ್ ಚಿಕ್ಕಂದಿನಿಂದಲೂ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದು ತಮ್ಮ ಪರಿಶ್ರಮದಿಂದ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಹುದ್ದೆಗೆ ಅರ್ಹರಾಗಿದ್ದಾರೆ. ವ್ಯಾಸಂಗ ಮುಗಿಯುತ್ತಿದ್ದಂತೆ ಮಂಗಳೂರು ವಕೀಲರ ಸಂಘದಲ್ಲಿಯೂ ಸಕ್ರಿಯ ಸದಸ್ಯರಾಗಿದ್ದರು. ನ್ಯಾಯಾಧೀಶರಾಗುವ ಕನಸು ಹೊತ್ತುಕೊಂಡಿದ್ದ ಅನಿಲ್ ಜಾನ್ ನ್ಯಾಯವಾದಿಗಳಾದ ದೀಪಕ್ ಡಿಸೋಜಾ, ನವೀನ್ ಪಾಯ್ಸ್ ಅವರ ಮಾರ್ಗದರ್ಶನದಲ್ಲಿ ಇದನ್ನು ಸಾಕಾರಗೊಳಿಸಿದ್ದಾರೆ.
SDM ಕಾನೂನು ಕಾಲೇಜಿನಲ್ಲಿ ತಮ್ಮ ಕಾಲೇಜು ವರ್ಷಗಳಲ್ಲಿ, ಅನಿಲ್ ತಮ್ಮ ನಾಯಕತ್ವದ ಪಾತ್ರಗಳನ್ನು ಮುಂದುವರೆಸಿದರು, ಸತತ ಎರಡು ವರ್ಷಗಳ ಕಾಲ ವರ್ಗ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದರು. ಕಾನೂನು ಕಾಲೇಜಿನಲ್ಲಿ ಓದುತ್ತಿದ್ದ ಸಮಯದಲ್ಲಿ ಗ್ರಂಥಾಲಯ ಸಲಹಾ ಸಮಿತಿಯ ಸಂಯೋಜಕರಾಗಿಯೂ ನಿರ್ಣಾಯಕ ಪಾತ್ರ ವಹಿಸಿದ್ದರು.ಅನಿಲ್ ಅವರ ಯಶಸ್ಸು ಅವರ ಸಮರ್ಪಣೆ, ಪರಿಶ್ರಮ ಮತ್ತು ವಕೀಲ ವೃತ್ತಿಯ ಮೇಲಿನ ಉತ್ಸಾಹಕ್ಕೆ ಸಾಕ್ಷಿಯಾಗಿದೆ. ಅವರ ಪ್ರಯಾಣವು ಮಹತ್ವಾಕಾಂಕ್ಷಿ ಕಾನೂನು ವೃತ್ತಿಪರರಿಗೆ, ವಿಶೇಷವಾಗಿ ಮಂಗಳೂರು ಪ್ರದೇಶದಲ್ಲಿ ಸ್ಫೂರ್ತಿಯಾಗಿದೆ.


