ಮಂಗಳೂರು ; ಮಂಗಳೂರು ಮಹಾನಗರ ನೌಕರರು ಸಹಕಾರ ಸಹಕಾರಿ ಸಘದ ವತಿಯಿಂದ 100 ನೇ ವರ್ಷದ ಪ್ರಯುಕ್ತ ನಾಳೆ ಉರ್ವಾಸ್ಟೋರ್ ಬಳಿಯ ಡಾ. ಅಂಬೇಡ್ಕರ್ ವೇದಿಕೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ನೌಕರರು ಹಾಗೂ ಕುಟುಂಬ ವರ್ಗದವರಿಗೆ ಸಾಂಸ್ಕೃತಿಕ ದಿನಾಚರಣೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.




ಈ ಕಾರ್ಯಕ್ರಮದ ಅಧ್ಯಕ್ಯತೆಯನ್ನು ಸುಶಾಂತ್ ಕೆ, ಉಪಾಧ್ಯಕ್ಷರಾಗಿ ಪ್ರೇಮಾನಾಥ್,ಕಾರ್ಯದರ್ಶಿಯಾಗಿ ವಾಸು ಹಾಗೂ ಶಿವಲಿಂಗಪ್ಪ, ಪುಷ್ಪರಾಜ್ ರವರು ವಹಿಸಲಿದ್ದಾರೆ.
ಈ ಕಾರ್ಯಕ್ರಮ್ ನೊಂದಾವಣಿ ಪ್ರಕ್ರಿಯೆ 9 ಗಂಟೆಗೆ ನಡೆಯಲಿದ್ದು,ದೀಪ ಪ್ರಜ್ವಲನೆಯ ನಂತರ ಮೊದಲನೆಯ ಸುತ್ತಿನ ರಸಪ್ರಶ್ನೆ ಕಾರ್ಯಕ್ರಮ ನಡೆಯಲಿದೆ. ಬಳಿಕ ಅಡುಗೆ ,ಚಿತ್ರಕಲೆ,ಪ್ರಬಂಧ ,ಕವನ ,ಹಾಗೂ ರಂಗೋಲಿ ಸ್ಪರ್ಧೆ ನಡೆಯಲಿದೆ.
ಬಳಿಕ ಏಕವ್ಯಕ್ತಿ ಗಾಯನ ಸಮೂಯ ಗಾಯನ,ಛದ್ಮವೇಷ,ರಸಪ್ರಶ್ನೆ,ನೃತ್ಯ, ಹಾಗೂ ಸಮಾರೋಪ ಸಮಾರಂಭದ ಕಾರ್ಯಕ್ರಮ ನಡೆಯಲಿದೆ.


