Tuesday, September 16, 2025
Flats for sale
HomeUncategorizedಮಂಗಳೂರು ; ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸೇವೆ ಸಮಾಜಕ್ಕೆ ಮಾದರಿ ; ಶ್ರೀನಿವಾಸ್ ನಾಯಕ್...

ಮಂಗಳೂರು ; ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸೇವೆ ಸಮಾಜಕ್ಕೆ ಮಾದರಿ ; ಶ್ರೀನಿವಾಸ್ ನಾಯಕ್ ಇಂದಾಜೆ…!

ಮಂಗಳೂರು ; ವಿದ್ಯಾರ್ಥಿಗಳಲ್ಲಿ ಎಳೆಯ ವಯಸ್ಸಿನಲ್ಲಿ ಸೇವಾ ಮನೋಭಾವನೆ ಬೆಳೆಸುವಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಹತ್ತರ ಪಾತ್ರ ವಹಿಸಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅಭಿಪ್ರಾಯ ಪಟ್ಟರು.
ನಗರದ ಲಾಲ್ ಬಾಗ್ ಬಳಿಯಿರುವ ಸ್ಕೌಟ್ಸ್ ಭವನದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಇದರ ಮಂಗಳೂರು ನಗರ ದಕ್ಷಿಣ ಸ್ಥಳೀಯ ಸಂಸ್ಥೆಗಳ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಾ ಮೋಹನ್ ಆಳ್ವ ರವರು ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತರಾದ ಬಳಿಕ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳಿಗೆ ಹೊಸ ರೂಪ ನೀಡಿದರು. ಪಿಲಿಕುಳ ದಲ್ಲಿ ನೂತನ ಸಭಾಂಗಣ ನಿರ್ಮಾಣ ಗೊಂಡ ಬಳಿಕ ಇಲ್ಲಿಯೂ ಹಲವಾರು ಚಟುವಟಿಕೆ ನಡೆಸಲು ಸಹಕಾರಿಯಾಗಿದೆ ಎಂದು ಹೇಳಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಂಗಳೂರು ನಗರ ದಕ್ಷಿಣ ಸ್ಥಳೀಯ ಸಂಸ್ಥೆ ಅಧ್ಯಕ್ಷ ವಸಂತ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀನಿವಾಸ್ ಪೂಜಾರಿ,ನಾರಾಯಣ. ಎಸ್, ಶ್ರೀಮತಿ ಶುಭ ವಿಶ್ವನಾಥ್,ಹರ್ಷ ಕುಮಾರ್ ಕೇದಿಗೆ, ಶ್ರೀಮತಿ ಸುಫಲ,ಕೋಶಾಧಿಕಾರಿ ಶ್ರೀಮತಿ ಸಂಧ್ಯಾ ಉಪಸ್ಥಿತರಿದ್ದರು.

ಶ್ರೀಮತಿ ಪ್ರೀತಿ ಲೋಬೋ ಸ್ವಾಗತಿಸಿದರು.ಶ್ರೀಮತಿ ಗೀತಾ ಜುpಡಿತ್ ವಂದಿಸಿದರು.ಸಿಸ್ಟರ್ ರೀಟಾ ಡಿ ಸೋಜಾ ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular