ಮಂಗಳೂರು : ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದ ಅ ಕ್ರ 54/2025 ಕಲಂ: 191[1], 191[2], 191[3], 118[1]. 118 [2], 109, 103 ಜೊತೆಗೆ 190BNS 2023) ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಪ್ರಕರಣದ ತನಿಖಾ ತಂಡವು ಇಂದು ಜೂನ್ 4ರಂದು ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದುಕೊಂಡಿದ್ದು ಬಂಟ್ವಾಳ ನಿವಾಸಿ ಭರತ್ ಕುಮ್ಡೇಲ್ ಎಂಬಾತನ ಮನೆಯನ್ನು ಶೋಧ ನಡೆಸಿದ್ದಾರೆ.ಆ ವೇಳೆ ಆರೋಪಿ ಪಲಾಯನವಾಗಿರುವುದರಿಂದ ಆತನ ಬಂಧನಕ್ಕೆ ಹಲವು ತಂಡ ರಚಿದ್ದಾರೆಂದು ತಿಳಿದಿದೆ.
ಮೊಹಮ್ಮದ್ ರಹೀಮ್ ಹತ್ಯೆ ಪ್ರಕರಣದಲ್ಲಿ ಈತನ ಪಾತ್ರವಿದೆ ಎಂದು ಸ್ದಪಿ ಮುಖಂಡರು ಆರೋಪಿಸಿದ್ದರು ,ಹಾಗೂ ಹಲವು ಪ್ರಕರಣಕ್ಕೆ ಸಂಬಂದಿಸಿದಂತೆ ಭರತ್ ಕುಮ್ಡೇಲ್ ಬಂಧನಕ್ಕೆ ಪೊಲೀಸರು ಬಲೆಬೀಸಿದ್ದಾರೆ.


