ಮಂಗಳೂರು : ಮಂಗಳೂರು ನಗರದಲ್ಲಿ ಮಳೆಯಿಂದ ಸಂತ್ರಸ್ತರಿಗೆ ಇಂದು ಮಧ್ಯಾಹ್ನ ಊಟದ ವ್ಯವಸ್ಥೆ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ನೀಡಲು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿರ್ಧಾರ ಮಾಡಿದೆ.
ಮಂಗಳೂರು : ನಗರದ ಹಲವು ಪ್ರದೇಶಗಳು ಜಲಾವೃತವಾಗಿದ್ದು ಮನೆಯ ಒಳಗಡೆ ನೀರು ನುಗ್ಗಿ ಜನರಿಗೆ ಇಂದು ಮಧ್ಯಾಹ್ನ ಅಡುಗೆ ಮಾಡಲು ಕೂಡ ತೊಂದರೆ ಇದ್ದು ಈ ಸಂದರ್ಭದಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಇಂತಹ ಕುಟುಂಬಗಳಿಗೆ ಶ್ರೀ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಮಾಡಲಾಗಿದೆ. ತೊಂದರೆಗೊಳಗಾದ ಮನೆಯವರು ಶ್ರೀ ಕ್ಷೇತ್ರಕ್ಕೆ ತಮ್ಮ ಮನೆಯ ಸದಸ್ಯರಿಗೆ ಅನ್ನವನ್ನು ತೆಗೆದುಕೊಂಡು ಹೋಗಬೇಕಾಗಿ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯು ಸಂತ್ರಸ್ತ ನಾಗರಿಕರಿಕರಿಗೆ ಅಧ್ಯಕ್ಷರು ಮತ್ತು ಸರ್ವಸದಸ್ಯರು ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ವಿನಂತಿಸಿದ್ದಾರೆ.
ಸಂಪರ್ಕ ನಂಬ್ರ:
ದಿಲ್ ರಾಜ್ ಆಳ್ವ ಮಂಗಳಾದೇವಿ- 9900512727
ರಾಜೇಂದ್ರ ಚಿಲಿಂಬಿ-9972185251
ಕಿರಣ್ ಕೊಡಿಯಾಲ್ ಬೈಲ್- 7899509356
ಅರುಣ್ ಕದ್ರಿ- 9243303805