ಮಂಗಳೂರು : ಮಂಗಳೂರಿನ ಹೆಸರಾಂತ ಆಸ್ಪತ್ರೆ ತುರ್ತು ಚಿಕಿತ್ಸೆಗೆ ಹೆಸರುವಾಸಿಯಾಗಿದ್ದು ಇದೀಗ ಅಲ್ಲಿ ರಾತ್ರೆ ಪಾಳಯದಲ್ಲಿ ದುಡಿಯುವ ವೈದ್ಯರು ಕಂಠಪೂರ್ತಿ ಕುಡಿದು ತುರ್ತು ನಿಗಾ ಕೊಠಡಿಯೊಳಗೆ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ. ವೈದ್ಯರು ಕಂಠಪೂರ್ತಿ ಕುಡಿದು ಬಿದ್ದು ಬಟ್ಟೆಗಳೆಲ್ಲ ಕೊಳೆಯಾಗಿದ್ದು ಸರಿಯಾಗಿ ಮಾತನಾದ ಪರಿಸ್ಥಿಯಲ್ಲಿದ್ದು ಇಂತಹವರನ್ನು ತುರ್ತು ನಿಗಾ ಕೊಠಡಿಯೊಳಗೆ ಪ್ರವೇಶಿಸಲು ಅನುಮತಿ ನೀಡಿದ ಆಸ್ಪತ್ರೆಯ ಆಡಳಿತ ಮಂಡಳಿಯ ವಿರುದ್ಧ ಸಾರ್ವಜನಿಕರು ಆಕ್ರೋಶಹೊರಹಾಕಿದ್ದಾರೆ.
ಮಂಗಳೂರಿನಲ್ಲಿ ಕೆಲವು ಹೆಸರಾಂತ ಆಸ್ಪತ್ರೆಗಳಲ್ಲಿ ರಾತ್ರಿ ಹೊತ್ತು ಎಂಬಿಬಿಎಸ್ ಕಲಿಯುವಂತಹ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಸಂಬಳ ಕೊಟ್ಟು ಡ್ಯೂಟಿ ಡಾಕ್ಟರ್ ಆಗಿ ನೇಮಕ ಮಾಡಿರುತ್ತಾರೆ ರಾತ್ರಿ ಹೊತ್ತು ಆಕಸ್ಮಿಕವಾಗಿ ಏನಾದರೂ ಸಂಭವಿಸಿದರೆ ತಕ್ಷಣ ನಾವೆಲ್ಲರೂ ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ರಾತ್ರಿ ಹೊತ್ತು ಹೋಗುತ್ತೇವೆ. ಇನ್ನು ಮುಂದೆ ನಾವುಗಳು ಮಂಗಳೂರಿನ ಕೆಲವು ಆಸ್ಪತ್ರೆಗಳಿಗೆ ಭೇಟಿ ಕೊಡುವಾಗ ಚಿಕಿತ್ಸೆ ಪಡೆಯುವಾಗ ಜಾಗೃತರಾಗಬೇಕು ಸಾಮಾಜಿಕ ಜಾಲತಾಣದಲ್ಲಿ ಬರೆದು ವೈರಲ್ ಮಾಡಿದ್ದಾರೆ.ಇದೀಗ ಚಿತ್ರದಲ್ಲಿ ಕುಂಟಿಕಾನ ಆಸ್ಪತ್ರೆಯ ಸಿಬ್ಬಂದಿಯಾಗಿದ್ದು ಇಷ್ಟೊಂದು ಅಜಾಗರೂಕತೆಯಿರುವುದರ ಬಗ್ಗೆ ಆಸ್ಪತ್ರೆಯ ರೋಗಿಗಳ ಪೋಷಕರಲ್ಲಿ ಆತಂಕ ಉಂಟಾಗಿದೆ.


