ಮಂಗಳೂರು : ಪಂಜಾಬ್ನಲ್ಲಿ ಧರ್ಮಸ್ಥಳ ಮೂಲದ ಏರೋಸ್ಪೆಸ್ ಉದ್ಯೋಗಿ ನಿಗೂಢ ರೀತಿಯಲ್ಲಿ ಸಾವಿಗೀಡಾದ ಘಟನೆ ನಡೆದಿದ್ದು ಮೇ 17 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೃತಾಳನ್ನು ಧರ್ಮಸ್ಥಳದ ಬೋಳಿಯಾರ್ ನಿವಾಸಿಗಳಾದ ಸುರೇಂದ್ರ ಸಿಂದೂದೇವಿ ಮಗಳು ಆಕಾಂಕ್ಷ ಎಂದು ತಿಳಿದಿದೆ.
ಪಂಜಾಬಿನ ಫಗ್ವಾಡಾ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪೂರೈಸಿ ಆರುತಿಂಗಳ ಹಿಂದೆ ಆಕಾಂಕ್ಷ ವೃತ್ತಿ ಜೀವನ ಆರಂಭಿಸಿದ್ದು ದೆಹಲಿಯಲ್ಲಿ ಏರೋಸ್ಪೆಸ್ ಇಂಜಿನಿಯರ್ ಆಗಿ ಉದ್ಯೋಗಮಾಡುತಿದ್ದರು. ಜಪಾನಿನಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ ಹಿನ್ನೆಲೆ ಆಕಾಂಕ್ಷ ಶೈಕ್ಷಣಿಕ ಪ್ರಮಾಣ ಪತ್ರ ಪಡೆಯಲು ಪಂಜಾಬ್ಗೆ ತೆರಳಿದ್ದಳು,ಬಳಿಕ ಶೈಕ್ಷಣಿಕ ಪ್ರಮಾಣ ಪತ್ರ ಪಡೆದು ಮನೆಯವರಿಗೆ ಕರೆ ಮಾಡಿ ಮಾತಾಡಿದ್ದರು ಆದರೆ ನಂತರ ನಿಗೂಢ ರೀತಿಯಲ್ಲಿ ಆಕಾಂಕ್ಷ ಸಾವನಪ್ಪಿದ್ದಾರೆ.ವಿಚಾರ ತಿಳಿದು ಪಂಜಾಬ್ಗೆ ಆಕಾಂಕ್ಷ ಮನೆಯವರು ತೆರಳಿದ್ದು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಪ್ರಕರಣದ ತನಿಖೆ ನಡೆಸಲು ಕೋರಿದ್ದಾರೆಂದು ಮಾಹಿತಿ ದೊರೆತಿದೆ.