Wednesday, October 22, 2025
Flats for sale
Homeಜಿಲ್ಲೆಮಂಗಳೂರು : ಕೋಟೆಕಾರು ಸಹಕಾರಿ ಸಂಘ ದಲ್ಲಿ ದರೋಡೆ ಪ್ರಕರಣ : ದಿಕ್ಕು ತಪ್ಪಿಸಲು ದರೋಡೆಕೋರರ...

ಮಂಗಳೂರು : ಕೋಟೆಕಾರು ಸಹಕಾರಿ ಸಂಘ ದಲ್ಲಿ ದರೋಡೆ ಪ್ರಕರಣ : ದಿಕ್ಕು ತಪ್ಪಿಸಲು ದರೋಡೆಕೋರರ ಖತರ್ನಾಕ್ ಪ್ಲಾನ್,ಒಂದು ಕಾರು ಮಂಗಳೂರಿಗೆ ಮತ್ತೊಂದು ಕಾರು ಕೇರಳದ ಕಡೆಗೆ ಪರಾರಿ ..!

ಮಂಗಳೂರು : ಸಿ.ಎಂ ಸಿದ್ದರಾಮಯ್ಯ ಜಿಲ್ಲೆಯಲ್ಲಿ ಬೇಟಿ ನೀಡುವ ಸಂದರ್ಭದಲ್ಲೇ ಐದು ಜನ ಮುಸುಕುದಾರಿಗಳು ನುಗ್ಗಿ ಗನ್ ತೋರಿಸಿ ದರೋಡೆ ಮಾಡಿದ ಘಟನೆ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಸುಮಾರು 4 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಲೂಟಿ ಮಾಡಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಲಾಗಿದೆ , ಹಣವನ್ನು ಗನ್ ತೋರಿಸಿ ಲೂಟಿ ಹೊಡೆದದ್ದಾರೆಂದು ತಿಳಿದಿದೆ. ಈ ಬಗ್ಗೆ ಸಿ ಎಂ ಸಿದ್ದರಾಮಯ್ಯ ಆಕ್ರೋಶಗೊಂಡಿದ್ದು ನೀವೆಲ್ಲ ಇದ್ದು ಯಾಕೆ ಹೀಗಾಯ್ತು ? ಆರೋಪಿಗಳು ಇಷ್ಟು ಸಲೀಸಾಗಿ ತಪ್ಪಿಸಿಕೊಂಡು ಹೋಗಿದ್ದು ಹೇಗೆ ? ನೀವು ಟೋಲ್ ಗಳನ್ನೂ ಯಾಕೆ ಟೈಟ್ ಮಾಡಲಿಲ್ಲ ? ಎಂದು ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ದರೋಡೆಕೋರರು ಎರಡು ಒಂದೇ ರೀತಿಯ ಕಾರಿನಲ್ಲಿ ಬಂದಿದ್ದರು. ಹೆದ್ದಾರಿ ತಲುಪುತ್ತಿದ್ದಂತೆಯೇ ಒಂದು ಕಾರು ಮಂಗಳೂರಿನ ಕಡೆ ತೆರಳಿದ್ದರೆ, ಇನ್ನೊಂದು ಕಾರು ಕೇರಳ ಕಡೆ ಪರಾರಿಯಾಗಿದೆ. ಹೀಗೆ ಎರಡು ಕಾರುಗಳಲ್ಲಿ ದರೋಡೆಕೋರರು ಬೇರ್ಪಟ್ಟಿದ್ದಾರೆ. ಅಷ್ಟೇ ಅಲ್ಲದೆ, ಕೃತ್ಯ ಎಸಗುವ ಸಂದರ್ಭದಲ್ಲಿ ಬ್ಯಾಂಕ್ ಸಿಬ್ಬಂದಿಯ ಮೊಬೈಲ್ ಫೋನನ್ನೂ ದರೋಡೆಕೋರರು ಕಿತ್ತುಕೊಂಡು ಹೋಗಿದ್ದಾರೆ. ದರೋಡೆಕೋರರ ಒಂದು ತಂಡ ಮಂಗಳೂರು ‌ನಗರದ ಕಡೆಗೆ ಬಂದು ಮೊಬೈಲ್ ಎಸೆದು ಪರಾರಿಯಾಗಿದ್ದಾರೆ.

ದರೋಡೆಕೋರರು ಮಂಗಳೂರು-ಉಡುಪಿ ಗಡಿ ಪ್ರದೇಶವಾದ ಹೆಜಮಾಡಿ ಬಳಿ‌ ಮೊಬೈಲ್ ಎಸೆದು ಹೋಗಿದ್ದಾರೆ. ಸದ್ಯ ಹೆಜಮಾಡಿ ಬಳಿ ಆ ಮೊಬೈಲ್ ಪತ್ತೆಯಾಗಿದೆ. ಇನ್ನು ಟೋಲ್ನಲ್ಲಿ ಫಾಸ್ಟ್ ಟ್ಯಾಗ್ ಬಳಸದೆ ಹಣ ಪಾವತಿಸಿದ ಸಿ ಸಿ ಫೂಟೇಜ್ ಪೊಲೀಸರಿಗೆ ಲಭಿಸಿದೆ.ಪೊಲೀಸರಿಗೆ ಬ್ಯಾಂಕ್ ಅಧ್ಯಕ್ಷ ಹಾಗೂ ಮ್ಯಾನೇಜರ್ ನಡುವಿನ ಹೇಳಿಕೆ ಗೊಂದಲ ಉಂಟುಮಾಡಿದೆ. ಖದೀಮರ ಬೇಟೆಗಾಗಿ ಮಂಗಳೂರಿನ ಪೊಲೀಸ್ ತಂಡಗಳು ಕೇರಳಕ್ಕೆ ತೆರಳಿ ಅಲ್ಲಿಯೂ ಶೋಧ ಕಾರ್ಯ ನಡೆಸಿವೆ. ದರೋಡೆಕೋರರ ತಂಡ ಪೊಲೀಸರ ತನಿಖೆಯ ದಿಕ್ಕುತಪ್ಪಿಸಲು ದರೋಡೆಕೋರರು ಮಾಡಿದ್ದ ಖತರ್ನಾಕ್ ಪ್ಲ್ಯಾನ್​ ಮಾಡಿದ್ದು ಇದರಲ್ಲಿ ಸ್ಥಳೀಯರು ಯಾರಾದ್ರೂ ಶಾಮೀಲಾಗಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ.ಒಟ್ಟಿನಲ್ಲಿ ರಾಜ್ಯದಲ್ಲಿ ದಿನದಿಂದ ದಿನಕ್ಕ್ಕೆ ಇಂತಹ ಪ್ರಕರಣಗಳು ಹೆಚ್ಚುತ್ತಿದ್ದು ಪೊಲೀಸ್ ಇಲಾಖೆಗೆ ತನೇನೋವು ಉಂಟಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular