ಬೆಳ್ತಂಗಡಿ : ಚಾರ್ಮಾಡಿ ಘಾಟ್ನ ಒಂಬತ್ತನೇ ಕರ್ವ್ ಬಳಿ ರಸ್ತೆ ದಾಟುತ್ತಿದ್ದ ಕಾಡಾನೆಯೊಂದು ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ.
ಏಪ್ರಿಲ್ 8 ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಆನೆ ಕಾಣಿಸಿಕೊಂಡಿದ್ದು, ಆನೆ ರಸ್ತೆ ದಾಟುತ್ತಿದ್ದಂತೆಯೇ ತಿಳಿಯದ ಬೈಕ್ ಸವಾರ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಇತರ ವಾಹನ ಸವಾರರು ತಮ್ಮ ವಾಹನಗಳನ್ನು ಎರಡೂ ಬದಿಯಲ್ಲಿ ನಿಲ್ಲಿಸಿ ಆನೆಯನ್ನು ದಾಟಿದ್ದಾರೆ.
ಕೆಲಕಾಲ ರಸ್ತೆಯಲ್ಲೇ ಇದ್ದ ಆನೆ ನಂತರ ನೆರಿಯ ಅರಣ್ಯದಲ್ಲಿ ಕಣ್ಮರೆಯಾಯಿತು. ಶನಿವಾರ ರಾತ್ರಿ ಕಾಡಾನೆ ದಾಳಿಯಿಂದ ಕಲ್ಮಂಜದಲ್ಲಿ ತೋಟವೊಂದು ಹಾನಿಗೊಳಗಾಗಿದ್ದು, ಇದೇ ಆನೆ ಎಂದು ಶಂಕಿಸಲಾಗಿದೆ.
ಎರಡು ತಿಂಗಳ ಹಿಂದೆಯೂ ಘಟ್ಟ ಪ್ರದೇಶದಲ್ಲಿ ಕಾಡಾನೆಯೊಂದು ಕಾಣಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.


