ಬೆಳಗಾವಿ : ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಯಾತ್ರೆಯ ಭವ್ಯ ಮೆರವಣಿಗೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು .ಕೇಸರಿ ಧ್ವಜ, ಬಾವುಟಗಳಿಂದ ರಸ್ತೆಗಳು ಕಂಗೊಳಿಸಿತಿದ್ದು ,ಯಾತ್ರೆಯ ಹನುಮನ ಪ್ರತಿಮೆಗೆ ಪುಷ್ಪ ಮಾಲೆಗಳ ಅಲಂಕಾರ, ಪೂಜೆ ನಡೆಯಿತು.
ಕರೀಕಟ್ಟಿ, ದೊಡವಾಡ, ಮಲ್ಲಮ್ಮನ ಬೆಳವಡಿ, ಪಟ್ಟಿಹಾಳ, ಖೋದಾನಪೂರ, ಸಂಗೊಳ್ಳಿ, ಗರ್ಜೂರ, ಕೆಂಗಾನೂರ, ನಯಾನಗರ, ಆನಿಗೋಳ ಗ್ರಾಮಗಳಲ್ಲಿ ರಥಯಾತ್ರೆಗೆ ಗ್ರಾಮಸ್ಥರು ಸ್ವಾಗತಿಸಿದರು.
ವಿಶ್ವಹಿಂದು ಪರಿಷದ್ ಜಿಲ್ಲಾ ಮುಖಂಡ ಪ್ರಮೋದಕುಮಾರ ವಕ್ಕುಂದಮಠ, ತಾಲ್ಲೂಕು ಘಟಕ ಅಧ್ಯಕ್ಷ ಕಾಶಿನಾಥ ಬಿರಾದಾರ, ಉಪಾಧ್ಯಕ್ಷ ಶಿವಾನಂದ ಬಡ್ಡಿಮನಿ, ಅನೇಕರು ಪಾಲ್ಗೊಂಡಿದ್ದರು


