ಬೆಳಗಾವಿ : ಕೋರ್ಟ್ ಆವರಣದಲ್ಲಿ ಪತ್ನಿ, ಅತ್ತೆ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ನಡೆದಿದೆ.
ಆರೋಪಿ ಪತಿ ಮುತ್ತಪ್ಪ ಗಣಾಚಾರಿಯಿಂದ ಈ ಕೃತ್ಯ ನಡೆದಿದ್ದು ಪತ್ನಿ ಐಶ್ವರ್ಯ, ಅತ್ತೆ ಅನುಸೋಯಾ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಕೌಟುಂಬಿಕ ಕಲಹ ಹಿನ್ನೆಲೆ ಡೈವರ್ಸಗೆ ದಂಪತಿ ಕೋರ್ಟ್ ಮೇಟ್ಟಿಲು ಏರಿದ್ದು ಕೇಸ್ ಗಾಗಿ ಇಂದು ಕೋರ್ಟಗೆ ಪತಿ ಪತ್ನಿ ಹಾಜರಾಗಿದ್ದರು.
ಸವದತ್ತಿ ತಾಲೂಕಿನ ನಿವಾಸಿ ಐಶ್ವರ್ಯ ಆರೋಪಿ ಬೈಲಹೊಂಗಲ ತಾಲೂಕಿನ ನಿವಾಸಿ ಮುತ್ತಪ್ಪ ಗಣಾಚಾರಿಯನ್ನು ಮದುವೆಯಾಗಿದ್ದು ಕೇಸ್ ಇದ್ದ ಕಾರಣ ಇಂದು ಐಶ್ವರ್ಯ ತನ್ನ ತಾಯಿ ಜೊತೆ ಕೋರ್ಟ್ಗೆ ಬಂದಿದ್ದರು.ಈ ವೇಳೆ ಆರೋಪಿ ಶರ್ಟ್ ಒಳಗಡೆ ಮಚ್ಚನ್ನು ಇರಿಸಿದ್ದು ಕೋರ್ಟ್ ಆವರಣದಲ್ಲಿ ಪತ್ನಿಯನ್ನು ಕಂಡಕೂಡಲೇ ವಾಗ್ವಾದ ನಡೆಸಿದ್ದಾನೆ ಬಳಿಕ ಆರೋಪಿ ಪತ್ನಿ ಹಾಗೂ ಅತ್ತೆಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.ಘಟನೆ ವೇಳೆ ಸ್ಥಳದಲ್ಲಿ ಪೊಲೀಸರು ಇದ್ದಿದ್ದು ಆರೋಪಿಯನ್ನು ತಕ್ಷಣವೇ ಹಿಡಿದು ವಶಕ್ಕೆ ಪಡೆದುಕೊಂಡಿದ್ದಾರೆ
ಬೆಳಗಾವಿ ಜಿಲ್ಲೆ ಸವದತ್ತಿ ಪೊಲೀಸ್ ಠಾಣೆ ವ್ಯಾಪ್ತಿ ಈ ಘಟನೆ ನಡೆದಿದ್ದು ತಕ್ಷಣವೇ ಸವದತ್ತಿ ಪೊಲೀಸರುಆರೋಪಿಯನ್ನ ವಶಕ್ಕೆ ಪಡೆದು ಗಂಭೀರ ಗಾಯಗೊಂಡ ಪತ್ನಿ ಐಶ್ವರ್ಯ, ಅತ್ತೆ ಅನುಸೋಯಾಳನ್ನ ಧಾರವಾಡ ಆಸ್ಪತ್ರೆಗೆ ರವಾನಿಸಿದ್ದಾರೆ.


