Wednesday, October 22, 2025
Flats for sale
Homeರಾಜ್ಯಬೆಂಗಳೂರು : ಸಿಗರೇಟ್ ಕಿಡಿ ತಗುಲಿ ಹೊತ್ತಿ ಉರಿದ ಮನೆ,ನಶೆಯ ಅಮಲಿನಲ್ಲಿದ್ದ ವ್ಯಕ್ತಿ ಸಜೀವ ದಹನ..!

ಬೆಂಗಳೂರು : ಸಿಗರೇಟ್ ಕಿಡಿ ತಗುಲಿ ಹೊತ್ತಿ ಉರಿದ ಮನೆ,ನಶೆಯ ಅಮಲಿನಲ್ಲಿದ್ದ ವ್ಯಕ್ತಿ ಸಜೀವ ದಹನ..!

ಬೆಂಗಳೂರು : ಕುಡಿದ ನಶೆಯಲ್ಲಿ ಸಿಗರೇಟ್ ಸೇದಿ ಮನೆಯಲ್ಲಿ ಬಟ್ಟೆ ಮೇಲೆ ಹಾಕಿದ್ದ ಹಿನ್ನೆಲೆ ಸಿಗರೇಟ್ ಕಿಡಿ ತಗುಲಿ ಮನೆ ಹೊತ್ತಿ ಹುರಿದು ಬೆಂಕಿಯ ಕೆನ್ನಾಲಿಗೆ ವ್ಯಕ್ತಿ ಸಿಲುಕಿ ಸುಟ್ಟು ಕರಕಲಾದ ಘಟನೆ ದೊಡ್ಡಬಳ್ಳಾಪುರ ನಗರದ ಕನ್ನಮಂಗಲ ಕಾಲೋನಿಲ್ಲಿ ನಡೆದಿದೆ.

ಉದಯ್ ಕುಮಾರ್ (35) ಮೃತ ವ್ಯಕ್ತಿ ಎಂದು ತಿಳಿದುಬಂದಿದೆ.

ತಾಯಿ ಮನೆಯಲ್ಲಿ ಇಲ್ಲದಿದ್ದಾಗ ಉದಯ್ ಕುಮಾರ್ ವಿಪರೀತ ಮದ್ಯ ಸೇವಿಸುತ್ತಿದ್ದು ಮನೆಯಲ್ಲಿರುವ ಬಟ್ಟೆಗಳನ್ನ ಒಂದು ಕಡೆ ಗುಡ್ಡೆ ಹಾಕಿದ್ದ ಹಿನ್ನೆಲೆ ಕುಡಿದ ಅಮಲಿನಲ್ಲಿ ಬಿಸಾಕಿದ ಸಿಗರೇಟ್ ನ ಕಿಡಿ ಬಟ್ಟೆಯ ಮೇಲೆ ಬಿದ್ದಿದ್ದು ಮನೆ ಪೂರ್ತಿ ಬೆಂಕಿ ಹತ್ತಿ ಉರಿದಿದೆ.ಕುಡಿದ ನಶೆಯಲ್ಲಿ ಪ್ರಜ್ಞೆ ತಪ್ಪಿ ಮಲಗಿದ್ದ ಉದಯ್ ಕುಮಾರ್ ಬೆಂಕಿಯಲ್ಲಿ ಸಜೀವ ದಹನವಾಗಿದ್ದಾರೆ.

ಮೃತ ಉದಯ್ ಮೃತದೇಹವನ್ನು ಶವ ಶವಾಗಾರಕ್ಕೆ ರವಾನಿಸಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ದೊಡ್ಡಬೆಳವಂಗಲ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕನ್ನಮಂಗಲ ಕಾಲೋನಿಗೆ ಪೊಲೀಸರು ಭೇಟಿನೀಡಿ ಪ್ರಕರಣ ದಾಖಲಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular