Thursday, March 12, 2026
Flats for sale
Homeಸಿನಿಮಾಬೆಂಗಳೂರು : ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ನಟ ದರ್ಶನ್ ಸ್ಥಳಾಂತರಕ್ಕೆ ಕೋರ್ಟ್ ಅನುಮತಿ...

ಬೆಂಗಳೂರು : ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ನಟ ದರ್ಶನ್ ಸ್ಥಳಾಂತರಕ್ಕೆ ಕೋರ್ಟ್ ಅನುಮತಿ : ಉಳಿದ ಆರೋಪಿಗಳು ಯಾವ್ಯಾವ ಜೈಲಿಗೆ ಶಿಫ್ಟ್? ಇಲ್ಲಿದೆ ಮಾಹಿತಿ ನೋಡಿ .

ಬೆಂಗಳೂರು : ಜೈಲಿನಲ್ಲೇ ರಾಜಾತಿಥ್ಯ ಪಡೆದ ಫೋಟೊ ಹಾಗೂ ವಿಡಿಯೊ ವೈರಲ್‌ ಆಗುತಿದ್ದ ಹಿನ್ನೆಲೆ ನಟ ದರ್ಶನ್‌ ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲುವಾಸ ಅನುಭವಿಸುತ್ತಿರುವ , ಆಗುತ್ತಿದ್ದಂತೆ ಸಂಕಷ್ಟ ಎದುರಾಗಿದೆ. ಈಗಾಗಲೇ ನಟ ದರ್ಶನ್‌ ವಿರುದ್ಧ ಎರಡು ಪ್ರತ್ಯೇಕ ದೂರುಗಳು ದಾಖಲಾಗಿದೆ. ಈ ಮಧ್ಯೆ ನಟ ದರ್ಶನ್​ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರಕ್ಕೆ ಬೆಂಗಳೂರಿನ 27ನೇ ಎಸಿಎಂಎಂ ಕೋರ್ಟ್​ ಒಪ್ಪಿಗೆ ನೀಡಿದೆ.

ಆರೋಪಿ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್​ ಆಗಲಿದ್ದು, ಪವನ್ , ರಾಘವೇಂದ್ರ, ನಂದೀಶ್ ಮೈಸೂರು ಜೈಲಿಗೆ ಶಿಫ್ಟ್​ ಆಗಬೇಕಿದೆ. ಜಗದೀಶ್​ಗೆ ಶಿವಮೊಗ್ಗ ಜೈಲು, ಧನರಾಜ್​ಗೆ ಧಾರವಾಡ ಜೈಲು ಗತಿಯಾಗಿದೆ. ವಿಜಯಪುರ ಜೈಲಿಗೆ ವಿನಯ್​ ಸ್ಥಳಾಂತರ ಆಗಬೇಕಿದೆ. ನಾಗರಾಜ್​ ಕಲಬುರಗಿ ಜೈಲು, ಲಕ್ಷ್ಮಣ ಶಿವಮೊಗ್ಗ ಜೈಲು, ಪ್ರದೂಶ್ ಬೆಳಗಾವಿ ಜೈಲಿಗೆ ಶಿಫ್ಟ್​ ಆಗಲಿದ್ದಾರೆ.

ಯಾರು ಯಾರನ್ನ ಯಾವ್ಯಾವ ಜೈಲಿಗೆ ಶಿಫ್ಟ್​..?

ದರ್ಶನ್- ಬಳ್ಳಾರಿ ಜೈಲು
ಪವನ್- ರಾಘವೇಂದ್ರ, ನಂದೀಶ್- ಮೈಸೂರು ಜೈಲು
ಜಗದೀಶ್- ಶಿವಮೊಗ್ಗ,
ಧನರಾಜ್- ಧಾರವಾಡ ಜೈಲು
ವಿನಯ್- ವಿಜಯಪುರ ಜೈಲು
ನಾಗರಾಜ್- ಕಲಬುರಗಿ
ಲಕ್ಷ್ಮಣ- ಶಿವಮೊಗ್ಗ
ಪ್ರದೂಶ್- ಬೆಳಗಾವಿ
ಪವಿತ್ರಗೌಡ- ಪರಪ್ಪನ ಅಗ್ರಹಾರ
ಅನುಕುಮಾರ್- ಪರಪ್ಪನ ಅಗ್ರಹಾರ
ದೀಪಕ್- ಪರಪ್ಪನ ಅಗ್ರಹಾರ
ಈಗಾಗಲೇ ರವಿ , ಕಾರ್ತಿಕ್, ನಿಖಿಲ್, ಕೇಶವಮೂರ್ತಿ ತುಮಕೂರು ಜೈಲಿನಲ್ಲಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪ ಹೊತ್ತಿರುವ ನಟ ದರ್ಶನ್ ಜೈಲಿನಲ್ಲೇ ದರ್ಬಾರ್ ಮಾಡುತ್ತಿದ್ದಾರೆ. ಆದರೆ ದರ್ಶನ್ ರಾಜಾಥಿತ್ಯದ ಫೋಟೋ ವೈರಲ್ ಆಗಿ ಕಥೆನೇ ಬೇರೆ ಇದೆ. ಜೈಲಿನೊಳಗಡೆ ಇರುವ ಆ ಎರಡು ಗ್ಯಾಂಗ್ ನಡುವಿನ ಕೋಲ್ಡ್ ವಾರ್ ದಾಸನಿಗೆ ಸಂಕಷ್ಟ ತಂದೊಡ್ಡಿದೆ.ಜೈಲಿನೊಳಗಿನ ರಾಜಕೀಯ ಕೂಡ ನಟ ದರ್ಶನ ಗೆ ನೆಲೆಯಿಲ್ಲದಂತೆ ಮಾಡಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular