ಬೀದರ್ : ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರ ಠಾಣೆ ಪೊಲೀಸರ ಯಶಸ್ವಿ ಕಾರ್ಯಚರಣೆಯಲ್ಲಿ ರೈತರ ಜಮೀನಿನಲ್ಲಿಯ ನೀರಿನ ಮೋಟಾರಗಳು ಕದಿಯುತಿದ್ದ ಇಬ್ಬರು ಕಳ್ಳರ ಬಂಧಿಸಿದ್ದಾರೆ.
ಬಸವಕಲ್ಯಾಣ ತಾಲೂಕಿನ ತಳಬೋಗ ಗ್ರಾಮದ ನಿವಾಸಿಗಳಾದ ಅಜೇಶ ಜಾಧವ ಹಾಗೂ ಜಿತೇಶ ಜಾಧವ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ.
ಕಳೆದ 6 ತಿಂಗಳಿಂದ ಬಸವಕಲ್ಯಾಣ ತಾಲೂಕಿನ ಪರ್ತಾಪೂರ ಗ್ರಾಮದ ವ್ಯಾಪ್ತಿಯಲ್ಲಿ ಬರುವ ರೈತರ ಜಮೀನುಗಳಲ್ಲಿಯ ಬಾವಿಗೆ ಅಳವಡಿಸಲಾಗಿದ್ದ ನೀರಿನ ಮೋಟಾರಗಳನ್ನು ಕಳ್ಳರು ಕದಿಯುತಿದ್ದರು .ಬಂಧಿತ ಕಳ್ಳರಿಂದ 9 ನೀರಿನ ಮೋಟಾರ್’ಗಳು ಜಪ್ತಿಮಾಡಲಾಗಿದೆ .


