ಬಾಗಲಕೋಟೆ : ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಹೃದಯಾಘಾತದಿಂದ ಸಾವನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದ ನಂದಿಕೇಶ್ವರ ಕಲ್ಯಾಣಮಂಟಪದಲ್ಲಿ ನಡೆದ ಘಟನೆ.
ಪ್ರವೀಣ ಕುರ್ನೆ ಎಂಬ ವರ ಮೃತಪಟ್ಟಿರುವುದು ತಿಳಿದುಬಂದಿದೆ.
ಪ್ರವೀಣ ಕುರ್ನೆ ಹಾಗೂ ಪೂಜಾ ಮದುವೆ ಇಂದು ನಡೆಯುತಿತ್ತು ಎಲ್ಲರೂ ಖುಷಿ ಕುಶಿಯಾಗಿಯೇ ಸಂಭ್ರಮದಲ್ಲಿದ್ದರು ಆದರೆ ಜವರಾಯ ಮದುವೆ ಮಂಟಪಕ್ಕೆ ಬಂದಿರುವುದು ತಿಳಿಯಲೇ ಇಲ್ಲ,ಮದುವೆ ನಡೆಯುತ್ತಿರುವ ಸಂಧರ್ಭದಲ್ಲಿ ವೇದಿಕೆ ಮೇಲೆಯೇ ವರ ಕುಸಿದು ಬಿದ್ದು ಮೃತಪಟ್ಟಿದ್ದಾನೆ.
ವರ ಪ್ರವೀಣ.. ಕುಂಬಾರಹಳ್ಳ ಗ್ರಾಮದ ನಿವಾಸಿಯಾಗಿದ್ದು ಮದುವೆ ಸಂಭ್ರಮದಲ್ಲಿ ಸೂತಕದ ಛಾಯೆ ಆವರಿಸಿದೆ.