ಬಳ್ಳಾರಿ : ಬ್ಯಾನರ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 67 ಜನ್ರಿಗೆ 107 ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ. ಬಿಜೆಪಿಯ 33 ಮಂದಿ ಹಾಗೂ ಕಾಂಗ್ರೆಸ್ನ 34 ಜನರ ವಿರುದ್ಧ 107 ಅಡಿ ಕೇಸ್.ಗುಂಪು ಗಲಭೆ, ಘರ್ಷಣೆ & ಶಾಂತಿ ಭಂಗ ಸಂಬಂಧಿಸಿದಂತೆ ತಾಲೂಕ ದಂಢಾಧಿಕಾರಿ ಕವಿತಾ ರಿಂದ ಪ್ರಕರಣ ದಾಖಲಿಸಲಾಗಿದೆ.
ಈ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ಬಿಜೆಪಿ ಹಾಗೂ ಕಾಂಗ್ರೆಸ್ನ ಮುಂಚೂಣಿ ನಾಯಕರಿಗೆ ನೋಟೀಸ್ ನೀಡಿದ್ದಾರೆ. ಬ್ರೂಸ್ಪೇಟೆ ಪೊಲೀಸ್ ಠಾಣೆ ತನಿಖಾಧಿಕಾರಿ ಮಾಂತೇಶ ಟಿ ಅವರಿಂದ ಒಂದಷ್ಟು ಹೆಸರು ಶಿಫಾರಸ್ಸು ಮಾಡಿದ್ದೂ ಶಿಫಾರಸ್ಸು ಆಧರಿಸಿ ತಾಲೂಕ ದಂಢಾಧಿಕಾರಿಗಳಿಂದ ನೋಟೀಸ್ ನೀಡಿದ್ದಾರೆ.


