Sunday, March 15, 2026
Flats for sale
Homeಜಿಲ್ಲೆಬಂಟ್ವಾಳ: ಕೈ ನೋವಿನಿಂದ ಬಳಲುತ್ತಿದ್ದ ಹೋಟೆಲ್ ಮಾಲೀಕ ನಾಪತ್ತೆ.

ಬಂಟ್ವಾಳ: ಕೈ ನೋವಿನಿಂದ ಬಳಲುತ್ತಿದ್ದ ಹೋಟೆಲ್ ಮಾಲೀಕ ನಾಪತ್ತೆ.

ಬಂಟ್ವಾಳ : ಕೈ ನೋವು ಬರುತ್ತಿದೆ ಎಂದು ವೈದ್ಯರ ಬಳಿ ಹೋದ ವ್ಯಕ್ತಿ ಬಳಿಕ ನಾಪತ್ತೆಯಾಗಿದ್ದಾರೆ. ಈ ಕುರಿತು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಪತ್ತೆಯಾದ ವ್ಯಕ್ತಿಯನ್ನು ತಾಲೂಕಿನ ಕುಕ್ಕಿಪಾಡಿ ಗ್ರಾಮದ ಸಿದ್ದಕಟ್ಟೆ ನಿವಾಸಿ ಸಂದೀಪ್ ಜೈನ್ ಎಂದು ಗುರುತಿಸಲಾಗಿದೆ.

ಕಾರ್ಕಳದ ಈದು ಗ್ರಾಮದ ನೂರಲಬೆಟ್ಟು ಎಂಬಲ್ಲಿ ಸಂದೀಪ್ ಅವರ ಮನೆ ಇದೆ. ಪ್ರಸ್ತುತ ಅವರು ಕಾರ್ಕಳ ಮಾರುಕಟ್ಟೆ ಪ್ರದೇಶದಲ್ಲಿ ಜೈನ್ ರೆಸ್ಟೋರೆಂಟ್ ಅನ್ನು ಹೊಂದಿದ್ದಾರೆ.

ಸಂದೀಪ್ ಅವರ ಪತ್ನಿ ಅಕ್ಷತಾ ನೀಡಿದ ದೂರಿನ ಪ್ರಕಾರ, ಜುಲೈ 31 ರಂದು ಕೈ ನೋವು ಕಾಣಿಸಿಕೊಂಡಿದ್ದರಿಂದ ವೈದ್ಯರ ಬಳಿಗೆ ಹೋಗುವುದಾಗಿ ಹೇಳಿ ಹೋಟೆಲ್‌ನಿಂದ ಹೋದರು, ಆದರೆ ಮನೆಗೆ ಹಿಂತಿರುಗಲಿಲ್ಲ.

ಸಂದೀಪ್ ನಾಪತ್ತೆಯಾದಲ್ಲಿ ಸಾರ್ವಜನಿಕರು 08256-286375 ಅಥವಾ 0824-2220500 ಅನ್ನು ಸಂಪರ್ಕಿಸಲು ಪೊಲೀಸರು ವಿನಂತಿಸಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular