ನವದೆಹಲಿ : ಆಪರೇಷನ್ ಸಿಂದೂರ ಕಾರ್ಯಾಚರಣೆ ನಂತರ ವಿದೇಶಾಂಗ ಸಚಿವ ಜೈಶಂಕರ್, ಆರೋಗ್ಯ ಸಚಿವ ಜೆ.ಪಿ.ನಡ್ಡಾ ಸೇರಿ 25 ವಿಐಪಿಗಳಿಗೆ ಭದ್ರತೆ ಹೆಚ್ಚಿಸಿ, ಬುಲೆಟ್ ಪ್ರೂಫ್ ಕಾರು, ಕಮಾಂಡೋ ಸೆಕ್ಯೂರಿಟಿಯನ್ನು ನೀಡಲಾಗಿದೆ. ಈ ಪಟ್ಟಿಯಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ಜೆಪಿ ನಡ್ಡಾ, ಭೂಪೇಂದರ್ ಯಾದವ್, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಸುಧಾಂಶು ತ್ರಿವೇದಿ ಹಾಗೂ ಬಿಜೆಪಿ ನಾಯಕ ಮುರಳಿ ಮನೋಹರ್ ಜೋಶಿ ಇದ್ದಾರೆ ಎನ್ನಲಾಗಿದೆ. ದೆಹಲಿ ಪೊಲೀಸ್ ಆಯುಕ್ತ ಸಂಜಯ್ ಅರೋರಾ ಅವರು ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಭಾರತದ ರಕ್ಷಣಾ ಸರಕುಗಳ ರಫ್ತು 10ವರ್ಷದಲಿ 34% ಪಟ್ಟು ಹೆಚ್ಚಳ
ಭಾರತದಿಂದ ರಕ್ಷಣಾ ರಫ್ತು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದ್ದು ಕಳೆದ 10 ವರ್ಷಗಳಲ್ಲಿ 34 ಪಟ್ಟು ಹೆಚ್ಚಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಈ ಬಗ್ಗೆ ಎಕ್ಸ್ನಲ್ಲಿ ಮಾಹಿತಿ ಹಂಚಿಕೊAಡಿರುವ ರಾಜನಾಥ್ ಸಿಂಗ್ ಅವರ ಕಚೇರಿ, 2014-15ರಲ್ಲಿ ಕೇವಲ 686 ಕೋಟಿಯಷ್ಟಿದ್ದ ಭಾರತದ ರಕ್ಷಣಾ ಸರಕುಗಳ ರಫ್ತು, 2024-25ರಲ್ಲಿ 23,622 ಕೋಟಿಯಷ್ಟಾಗಿದೆ. ಆತ್ಮನಿರ್ಭರ ಭಾರತ ಧ್ಯೇಯದಿಂದಾಗಿ ರಕ್ಷಣಾ ವಲಯ ಹಿಂದೆAದಿಗಿAತಲೂ ಬಲವಾಗಿ ಬೆಳೆಯುತ್ತಿದೆ ಎಂದು ತಿಳಿಸಲಾಗಿದೆ.
ಉಗ್ರರ ತವರು ಪಾಕಿಸ್ತಾನಕ್ಕೆ ಮತ್ತೆ ಐಎಂಎಫ್ನಿಂದ ಮತ್ತೊಂದು ಸುತ್ತಿನ ಸಾಲ ಬಿಡುಗಡೆ .
ಭಾರತದ ವಿರೋಧದ ನಡುವೆಯೂ ಪಾಕಿಸ್ತಾನ ಈಗ ಅಂತಾರಾಷ್ಟಿçÃಯ ಹಣಕಾಸು ನಿಧಿಯಿಂದ ಮತ್ತೊಂದು ಸುತ್ತಿನ ಸಹಾಯವನ್ನು ಪಡೆದಿದೆ. ಈ ಬಾರಿ ದೀರ್ಘಾವಧಿ ಸಾಲ ಕಾರ್ಯಕ್ರಮವಾದ ವಿಸ್ತೃತ ನಿಧಿ ಸೌಲಭ್ಯ( ಇಎಫ್ಎಫ್ ) ದಡಿ ದೇಶವು 1.02 ಶತಕೋಟಿ ಡಾಲರ್ ಹಣ ಪಡೆದುಕೊಂಡಿದೆ. ಪಾಕಿಸ್ತಾನದ ಕೇಂದ್ರ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ ಈ ಮಾಹಿತಿಯನ್ನು ಹಂಚಿಕೊAಡಿದ್ದು ಮೇ 16ಕ್ಕೆ ಕೊನೆಗೊಳ್ಳುವ ವಾರದ ವಿದೇಶಿ ವಿನಿಮಯ ಸಂಗ್ರಹದಲ್ಲಿ ಈ ಮೊತ್ತ ಕಾಣಿಸಿಕೊಳ್ಳಲಿದೆ ಎಂದಿದೆ.