Sunday, June 1, 2025
Flats for sale
Homeದೇಶನವದೆಹಲಿ : ಭಯೋತ್ಪಾದನೆಯನ್ನು ಪೋಷಿಸುತ್ತಿರುವ ಪಾಕ್‌ನ ಮುಖವಾಡವನ್ನು ವಿಶ್ವದೆದುರು ಕಳಚಲು ಭಾರತ ಸರ್ಕಾರ ನಿರ್ಧಾರ,ಶಶಿ ತರೂರ್...

ನವದೆಹಲಿ : ಭಯೋತ್ಪಾದನೆಯನ್ನು ಪೋಷಿಸುತ್ತಿರುವ ಪಾಕ್‌ನ ಮುಖವಾಡವನ್ನು ವಿಶ್ವದೆದುರು ಕಳಚಲು ಭಾರತ ಸರ್ಕಾರ ನಿರ್ಧಾರ,ಶಶಿ ತರೂರ್ ಗೆ ಸರ್ವಪಕ್ಷ ನಿಯೋಗ ಹೊಣೆ..!

ನವದೆಹಲಿ : ಪಹಲ್ಗಾಮ್ ದಾಳಿ ಪ್ರತೀಕಾವಾಗಿ ನಡೆಸಿದ ಆಪರೇಷನ್ ಸಿಂದೂರ ಹಾಗೂ ಭಯೋತ್ಪಾದನೆಯನ್ನು ಪೋಷಿಸುತ್ತಿರುವ ಪಾಕ್‌ನ
ಮುಖವಾಡವನ್ನು ವಿಶ್ವದೆದುರು ಕಳಚಲು ಭಾರತ ಸರ್ಕಾರ ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಸರ್ವ ಪಕ್ಷಗಳ ನಿಯೋಗವನ್ನು ಪ್ರಮುಖ ರಾಷ್ಟ್ರಗಳಿಗೆ ಕಳುಹಿ
ಸಲು ತೀರ್ಮಾನಿಸಿದೆ.

30 ಸಂಸದರು ಈ ನಿಯೋಗದಲ್ಲಿ ಇರಲಿದ್ದಾರೆಂದು ಹೇಳಲಾಗಿದೆಯಾದರೂ ಆ ಬಗ್ಗೆ ಇನ್ನೂ ಖಚಿತತೆ ದೊರೆತಿಲ್ಲ. ಆದರೆ ಪಾಕ್ ಮುಖಭಂಗ ಮಾಡಲು
ಕೇಂದ್ರ ಸರ್ಕಾರ ಕೈಗೊಂಡಿರುವ ಈ ನಿರ್ಧಾರವನ್ನೂ ಕಾಂಗ್ರೆಸ್ಸೂ ಸೇರಿದಂತೆ ಇನ್ನುಳಿದ ವಿರೋಧ ಪಕ್ಷಗಳು ಕೂಡ ಸ್ವಾಗತಿಸಿವೆ. ಬಿಜೆಪಿ, ಕಾಂಗ್ರೆಸ್, ಎನ್‌ಸಿಪಿ(ಎಸ್‌ಪಿ), ಟಿಎಂಸಿ, ಡಿಎAಕೆ, ಜೆಡಿಯು, ಬಿಜೆಡಿ, ಸಿಪಿಐ(ಎಂ) ಸಂಸದರು ನಿಯೋಗದಲ್ಲಿ ಇರಲಿದ್ದಾರೆ. ಮೇ ೨೨ ಅಥವಾ ೨೩ರಿಂದ ನಿಯೋಗ ಪ್ರವಾಸ ಆರಂಭಿಸಲಿದ್ದು ೧೦ ದಿನಗಳ ಕಾಲ ಪಾಕ್ ಮುಖಭಂಗದ ಅಭಿಯಾನ ನಡೆಯಲಿದೆ.

ಅನುರಾಗ್ ಠಾಕೂರ್, ಅಪರಾಜಿತಾ ಸಾರಂಗಿ ಬಿಜೆಪಿಯಿಂದ ,ಕಾಂಗ್ರೆಸ್‌ನಿಂದ ಶಶಿ ತರೂರ್,ಮನೀಶ್ ತಿವಾರಿ, ಸಲ್ಮಾನ್ ಕುರ್ಷಿದ್ ಮತ್ತು ಅಮರ್ ಸಿಂಗ್ ಈ ನಿಯೋಗದಲ್ಲಿ ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನು ಟಿಎಂಸಿಯಿಂದ ಸುದೀಪ್ ಬಂಡೋಪಾಧ್ಯಾಯ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ನಿಯೋಗದಲ್ಲಿದ್ದಾರೆ. ಈ ನಿಯೋಗದಲ್ಲಿರುವ ಸಂಸದರಾದ ಕಾಂಗ್ರೆಸ್‌ನ ಶಶಿ ತರೂರ್, ಬಿಜೆಪಿಯ ರವಿಶಂಕರ್ ಪ್ರಸಾದ್,ಬೈಜಂತ್ ಪಾAಡ, ಜೆಡಿಯು ಪಕ್ಷದ ಸಂಜಯ್ ಕುಮಾರ್ ಝಾ, ಡಿಎಂಕೆಯ ಕನಿಮೋಳಿ ಕರುಣಾನಿಧಿ, ಎನ್‌ಸಿಪಿಯ ಸುಪ್ರಿಯಾ ಸುಳೆ, ಶಿವಸೇನೆಯ ಶ್ರೀಕಾಂತ್ ಏಕನಾಥ ಶಿಂಧೆ ಅವರನ್ನು ಕೇಂದ್ರ ಸರ್ಕಾರ ಆಯ್ಕೆ ಮಾಡಿದ್ದು ಭಯೋತ್ಪಾದನೆ ಕುರಿತು ದೇಶದ ನಿಲುವು ಹಾಗೂ ಪಾಕ್‌ನ ಮುಖವಾಡವನ್ನು ಜಗತ್ತಿನ ವಿವಿಧ ದೇಶಗಳ ಮುಂದೆ ಅನಾವರಣಗೊಳಿಸುವ ಜವಾಬ್ದಾರಿ ವಹಿಸಲಾಗಿದೆ.

ಕೇಂದ್ರ ಸರ್ಕಾರವನ್ನು ಹೊಗಳಿದ್ದಕ್ಕಾಗಿ ಕಾಂಗ್ರೆಸ್ ಪಕ್ಷದಿಂದ ಟೀಕೆ ಎದುರಿಸುತ್ತಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ಇದೀಗ ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ಭಾರತದ “ಬಲವಾದ ಸಂದೇಶ”ವನ್ನು ಜಗತ್ತಿಗೆ ಸಾರಲು ಸರ್ವಪಕ್ಷ ನಿಯೋಗದ ನೇತೃತ್ವ ವಹಿಸಲಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊAಡಿರುವ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಇದು “ಅತ್ಯಂತ ಮುಖ್ಯವಾದ ಕ್ಷಣಗಳಲ್ಲಿ, ಭಾರತ ಒಗ್ಗಟ್ಟಿನಿಂದ ನಿಂತಿದೆ”. ಏಳು ಮಂದಿ ಸರ್ವಪಕ್ಷ ನಿಯೋಗಗಳು ಶೀಘ್ರದಲ್ಲೇ ಪ್ರಮುಖ ಪಾಲುದಾರ ರಾಷ್ಟçಗಳಿಗೆ ಭೇಟಿ ನೀಡಲಿವೆ, ಭಾರತದ “ಭಯೋತ್ಪಾದನೆಯ ಶೂನ್ಯ ಸಹಿಷ್ಣುತೆಯ ಹಂಚಿಕೆಯ ಸಂದೇಶ”ವನ್ನು ಹೊತ್ತುಕೊಂಡು ಹೋಗಲಿವೆ ಎಂದು ಅವರು ತಿಳಿಸಿದ್ದಾರೆ. “ರಾಜಕೀಯಕ್ಕಿಂತ ಹೆಚ್ಚಾಗಿ, ಭಿನ್ನಾಭಿಪ್ರಾಯಗಳನ್ನು ಮೀರಿ ರಾಷ್ಟಿçÃಯ ಏಕತೆಯ ಪ್ರಬಲ ಪ್ರತಿಬಿಂಬ”ವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular