ನವದೆಹಲಿ : ಪಾಕಿಸ್ತಾನ ವಿರುದ್ಧ ಆಪರೇಷನ್ ಸಿಂಧೂರ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಒಟ್ಟಾರೆ 40 ಸಾವಿರ ಕೋಟಿ ರೂಪಾಯಿ ಮಿತಿಯಲ್ಲಿ ತುರ್ತು ಖರೀದಿಗೆ ಸಶಸ್ತ್ರ ಪಡೆಗಳಿಗೆ ಅಧಿಕಾರ ನೀಡಿದೆ. ಪಾಕಿಸ್ತಾನ ಗಡಿಯಾಚೆಗಿನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ತನ್ನ ಕಾರ್ಯಶೈಲಿಯನ್ನು ಕೊನೆಗೊಳಿಸದಿದ್ದರೆ, ಶತ್ರುರಾಷ್ಟçದ ಜತೆಗೆ ಮಾಡಿಕೊಂಡಿರುವ ಆಪರೇಷನ್ ಸಿಂಧೂರ ಯುದ್ಧವಿರಾಮ ಕೇವಲ `ಕಾರ್ಯತಂತ್ರದವಿರಾಮ’ ಎಂದು ಭಾರತ ಸ್ಪಷ್ಟಪಡಿಸಿದೆ.
ಭಾರತೀಯ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಗಳಿಗೆ ಇಪಿ-೬ ಅಧಿಕಾರ ನೀಡಲಾಗಿದ್ದು, ಇದರಿಂದಾಗಿ ಮೂರೂ ಪಡೆಗಳು ಇನ್ನಷ್ಟು ಶಸ್ತಾçಸ್ತçಗಳನ್ನು ಸಂಗ್ರಹದಲ್ಲಿ ಇಟ್ಟುಕೊಳ್ಳಲು ಅನುಕೂಲವಾಗಲಿದೆ. ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಖರೀದಿ ಮಂಡಳಿ ಕೆಲ ದಿನಗಳ ಹಿಂದೆ ಈ ಅಧಿಕಾರವನ್ನು ಸಶಸ್ತç ಪಡೆಗಳಿಗೆ ನೀಡಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮೊದಲ ನಾಲ್ಕು ಇಪಿಗಳನ್ನು ಪೂರ್ವ ಲಡಾಖ್ ನಲ್ಲಿ ಚೀನಾ ಜತೆಗಿನ ಸೇನಾ ಸಂಘರ್ಷದ ವೇಳೆ ಮಂಜೂರು ಮಾಡಲಾಗಿದ್ದು, ಉಗ್ರಗಾಮಿ ನಿಗ್ರಹ ಕಾರ್ಯಾಚರಣೆಗೆ ಐದನೇ ಇಪಿ ಮಂಜೂರು ಮಾಡಲಾಗಿತ್ತು. ಇದೀಗ ಇಪಿ-7 ಅಡಿಯಲ್ಲಿ ಸಶಸ್ತç ಪಡೆಗಳು ತಲಾ 300 ಕೋಟಿ ರೂಪಾಯಿ ಮೌಲ್ಯದ ತ್ವರಿತ ಗತಿಯ ಬಹು ಗುತ್ತಿಗೆಗಳನ್ನು ಹೂಡಿಕೆ ಮತ್ತು ಆದಾಯ ಶೀರ್ಷಿಕೆಯಡಿ ಮಾಡಿಕೊಳ್ಳಲು ಅವಕಾಶವಿದೆ. ಇದಕ್ಕೆ ಸುಧೀರ್ಘ ಕಾಲ ವಿಸ್ತರಿಸುವ ಖರೀದಿ ಪ್ರಕ್ರಿಯೆಯನ್ನು ಅನುಸರಿಸುವ ಅಗತ್ಯವಿಲ್ಲ. ಈ ಗುತ್ತಿಗೆಗಳನ್ನು 40 ದಿನಗಳಲ್ಲಿ ಪೂರ್ಣಗೊಳಿಸಬೇಕಿದ್ದು, ಒಂದು ವರ್ಷದ ಒಳಗಾಗಿ ವಿತರಣೆ ಪೂರೈಸಬೇಕು. ಮೂರೂ ಪಡೆಗಳ ಉಪ ಮುಖ್ಯಸ್ಥರು ಈ ಅಧಿಕಾರಗಳನ್ನು ಚಲಾಯಿಸಬಹುದಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಇದು ಸಶಸ್ತç ಪಡೆಗಳಿಗೆ ತ್ವರಿತವಾಗಿ ಶಸ್ತಾçಸ್ತçಗಳು, ಕ್ಷಿಪಣಿಗಳು ಮತ್ತು ಧೀರ್ಘ ಸಾಮರ್ಥ್ಯದ ಶಸ್ತಾçಸ್ತçಗಳು, ಲೋಯಿಟರ್ ಮತ್ತು ನಿಖರ-ನಿರ್ದೇಶಿತ ಶಸ್ತಾçಸ್ತçಗಳು, ಕಮಿಕಾಝ್ ಡ್ರೋನ್ ಗಳು ಮತ್ತು ಡ್ರೋನ್ ಪ್ರತಿರೋಧ ವ್ಯವಸ್ಥೆ ಮತ್ತಿತರ ಶಸ್ತಾçಸ್ತçಗಳನ್ನು ಖರೀದಿಸಲು ಅನುವು ಮಾಡಿಕೊಡಲಿದೆ. ಪ್ರಸಕ್ತ ಹಣಕಾಸು ವರ್ಷಕ್ಕೆ ನಿಗದಿಪಡಿಸಿದ ಒಟ್ಟು ಮೊತ್ತದಲ್ಲಿ ಶೇಕಡ 15ರಷ್ಟು ಮೌಲ್ಯದ ಶಸ್ತಾçಸ್ತçಗಳನ್ನು ಈ ಅಧಿಕಾರದಡಿ ಖರೀದಿಸಬಹುದಾಗಿದೆ.