ದಾವಣಗೆರೆ : ಸಿ.ಎಂ ಸಿದ್ದರಾಮಯ್ಯ ತನ್ನ ಅಧಿಕಾರದ ಅವಧಿಯನ್ನು ಅಸ್ತಾಂತರಿಸಲು ನಿರಾಕರಿಸುತಿದ್ದು ಈ ಹಿನ್ನೆಲೆ ಡಿ.ಕೆ.ಶಿವಕುಮಾರ ಜೊತೆಗೆ ರಾಜ್ಯದಲ್ಲಿ ಸರ್ಕಾರ ಮಾಡಲು ಒಪ್ಪಂದವಾಗಿದ್ದು, ಮುಖ್ಯಮಂತ್ರಿ ಯಾಗಿ ಶಿವಕುಮಾರ, ಉಪ ಮುಖ್ಯಮಂತ್ರಿಯಾಗಿ ವಿಜಯೇಂದ್ರ ಎನ್ನುವ ಒಪ್ಪಂದವೂ ಆಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿನಲ್ಲಿ ಡಿ.ಕೆ.ಶಿವಕುಮಾರ್ಗೆ ಮುಖ್ಯಮಂತ್ರಿಯಾಗಲು ಯಾವುದೇ ಅವಕಾಶ ಕೊಡುವುದಿಲ್ಲ. ಡಿಕೆಶಿ ಜೊತೆಗೆ ರಾಜ್ಯದಲ್ಲಿ ಸರ್ಕಾರ ರಚನೆಗೆ ಒಪ್ಪಂದವಾಗಿದ್ದು, ನಾನು ಹೊಸದಾಗಿ ಏನಾದರೂ ಮಾಡುತ್ತೇನೆಯೇ ಹೊರತು, ಕಾಂಗ್ರೆಸ್ಸಿಗೆ ಹೋಗುವುದಿಲ್ಲ ಎಂದರು.
ಬಿಜೆಪಿಯಲ್ಲಿ ಕೆಲಸ ಮಾಡುವುದಕ್ಕೆ ಸಮರ್ಥ ನಾಯಕತ್ವ ಇಲ್ಲ. ಬಿಜೆಪಿಯಲ್ಲಿ ಹೊಸ ಕೂಸು ಹುಟ್ಟುತ್ತದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪಾಲ್ಗೊಳ್ಳುವ ಕಾರ್ಯಕ್ರಮದಲ್ಲಿ ಒಂದು ಸಾವಿರ ಜನರು ಸಹ ಸೇರುವುದಿಲ್ಲ. ಇದು ಸಮರ್ಥ ರಾಜ್ಯಾಧ್ಯಕ್ಷ ಇಲ್ಲವೆಂಬುದನ್ನು ತೋರಿಸುತ್ತದೆ. ಆದ್ದರಿಂದಲೇ ಶೀಘ್ರವೇ ಪಕ್ಷದಲ್ಲಿ ಹೊಸ ಕೂಸು ಹುಟ್ಟಲಿದೆ ಎಂದು ಅವರು ಭವಿಷ್ಯ ನುಡಿದರು.
ವೀರಶೈವ ಲಿಂಗಾಯತರನ್ನು ಒಗ್ಗೂಡಿಸಲು ಆಗಿಲ್ಲ. ಸಂಸದ ಬಿ.ವೈ.ರಾಘವೇಂದ್ರ, ಯಡಿಯೂರಪ್ಪಗೆ ಶಾಮನೂರು ಶಿವಶಂಕರಪ್ಪ ಆಶೀರ್ವಾದವಿದೆ. ರೇಣುಕಾಚಾರ್ಯ ಅಪ್ಪ-ಮಗನಿಗೆ ಹೆದರಿಸುತ್ತಾನೆ. ಈಶ್ವರಪ್ಪನಿಗೂ ಹೆದರಿಸೋಕೆ ಹೇಳುತ್ತಾರೆ. ವಿಜಯೇಂದ್ರ ಸಹ ಸಿಡಿ ಕಂಪನಿ ಮಾಲೀಕ. ಡಿ.ಕೆ.ಶಿವಕುಮಾರ ಸಹ ಅದೇ ಮಾಡುತ್ತಾರೆ. ವಿಜಯೇಂದರ್ ಸಿಡಿ ಸಹ ಅಧಿಕಾರಿಗಳಿಂದ ಡಿಲೀಟ್ ಆಗಿ, ಪ್ರಕರಣ ಕ್ಲೋಸ್ ಆಗಿದೆ ಎಂದು ದೂರಿದರು. ಕಾಂಗ್ರೆಸ್ನವರು ಭ್ರಷ್ಟಾಚಾರವನ್ನು ಬಿಟ್ಟರೆ ಬೇರೇನನ್ನೂ ಮಾಡಿಲ್ಲ. ಕಾಂಗ್ರೆಸ್ಸಿನವರ ಸಾಧನೆಯೆಂದರೆ ಪಂಚ ಗ್ಯಾರಂಟಿ ಮಾತ್ರ. ಆದರೆ, ಅದ್ಯಾವ ಸಾಧನೆ ಮಾಡಿದ್ದಾರೆಂಬAತೆ ಹೊಸಪೇಟೆಯಲ್ಲಿ ಸಾಧನ ಸಮಾವೇಶ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ನಿAದ ಈ ದೇಶಕ್ಕೆ ಸ್ವಾತಂತ್ರ÷್ಯ ಸಿಕ್ಕಿಲ್ಲ. ಸ್ವಾತಂತ್ರ÷್ಯವೇನಾದರೂ ಸಿಕ್ಕಿದ್ದರೆ ಅದು ನೇತಾಜಿ ಸುಭಾಶ್ಚಂದ್ರ ಬೋಸ್ರಿಂದ ಎಂದು ಅವರು ತಿಳಿಸಿದರು.
ದೇಶದ ವಿಷಯದಲ್ಲಿ ಎಲ್ಲರೂ ಒಗ್ಗಟ್ಟಾಗಿ ಮಾತನಾಡಬೇಕು. ಸಚಿವರಾದ ಪ್ರಿಯಾಂಕ ಖರ್ಗೆ, ಸಂತೋಷ ಲಾಡ್ ಮಾನಸಿಕ ಸ್ಥಿತಿ ಜನರು ಗಮನಿಸುತ್ತಿದ್ದಾರೆ. ಪಾಕಿಸ್ಥಾನದ ಅಭಿಮಾನಿಗಳನ್ನು ಖುಷಿಪಡಿಸುವುದಕ್ಕೆ ಇಂತಹವರು ಮಾತನಾಡುತ್ತಾರೆ. ಮಾನ ಮರ್ಯಾದೆ ಇದ್ದರೆ ಬಾಯಿ ಮುಚ್ಚಿಕೊಂಡು ಇರಬೇಕು. ಬಾಯಿ, ನಾಲಿಗೆಯನ್ನು ಸರಿಯಾಗಿಟ್ಟುಕೊಂಡು, ಪ್ರಿಯಾಂಕಖರ್ಗೆ, ಸಂತೋಷ ಲಾಡ್ ಮಾತನಾಡಲಿ ಎಂದು ಅವರು ತಾಕೀತು ಮಾಡಿದರು.
ಪಾಕಿಸ್ಥಾನದ ಹೀರೋ ರಾಹುಲ್ ಗಾಂಧಿ, ಸಿದ್ದರಾಮಯ್ಯ ಅಲ್ಲಿಗೆ ಹೋಗಿ ನೋಡಿಕೊಂಡು ಬರಲಿ. ದೇಶದ ಸೈನ್ಯಕ್ಕೆ ಪ್ರೋತ್ಸಾಹ ಕೊಡಬೇಕೆಂದರೆ, ಕಾಂಗ್ರೆಸ್ಸಿನ ಇಂತಹವರು ಹೀಗೆಲ್ಲಾ ಮಾತನಾಡುತ್ತಾರೆ. ದೇಶದ ವಿಚಾರ ಬಂದಾರ ಯಾರೇ ಆಗಿದ್ದರೂ ರಾಜಕೀಯ ಮಾಡಬಾರದು. ಸಂತೋಷ ಲಾಡ್ ರಾಜ್ಯದ ಕೆಲಸ ಮಾಡುವುದನ್ನು ಬಿಟ್ಟು, ಪ್ರಧಾನಿ ಬಗ್ಗೆ ಮಾತನಾಡುತ್ತಾರೆ ಎಂದು ಬಸನಗೌಡ ಪಾಟೀಲ ಯತ್ನಾಳ ಕಿಡಿಕಾರಿದರು.