Wednesday, November 5, 2025
Flats for sale
Homeರಾಜ್ಯಚಿಕ್ಕಬಳ್ಳಾಪುರ : ಹೆಂಡತಿಯ ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಯತ್ನ,ಪಾಲಿಡಾಲ್ ಕುಡಿದಿದ್ದ ವ್ಯಕ್ಯಿಯನ್ನು ಸಿನಿಮಾ ಶೈಲಿಯಲ್ಲಿ...

ಚಿಕ್ಕಬಳ್ಳಾಪುರ : ಹೆಂಡತಿಯ ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಯತ್ನ,ಪಾಲಿಡಾಲ್ ಕುಡಿದಿದ್ದ ವ್ಯಕ್ಯಿಯನ್ನು ಸಿನಿಮಾ ಶೈಲಿಯಲ್ಲಿ ಪೊಲೀಸರಿಂದ ರಕ್ಷಣೆ..!

ಚಿಕ್ಕಬಳ್ಳಾಪುರ : ಹೆಂಡತಿಯ ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಯತ್ನ ಪಾಲಿಡಾಲ್ ಕುಡಿದಿದ್ದ ಆರೋಪ ಕೇಳಿಬಂದಿದ್ದು ಸಿನಿಮಾ ಶೈಲಿಯಲ್ಲಿ ಪೊಲೀಸರು ಶೆಟ್ಟಿಗೆರೆ ಕ್ರಾಸ್ ಅರಣ್ಯ ಪ್ರದೇಶದಲ್ಲಿ ರಕ್ಷಿಸಿದ ಘಟನೆ ನಡೆದಿದೆ.

ಮಂಚೇನಹಳ್ಳಿ ತಾಲೂಕಿನ ಗೌಡನಹಳ್ಳಿ ರಾಮಾಂಜನಪ್ಪ (33) ಆತ್ಮಹತ್ಯೆಗೆ ಯತ್ನಿಸಿರುವ ವ್ಯಕ್ತಿ ಎಂದು ತಿಳಿದಿದೆ.ಪೊಲೀಸರು ರೌಡ್ಸ್ ಗೇ ಹೋದ ವೇಳೆ ಅನುಮಾನಸ್ಪದ ರೀತಿಯಲ್ಲಿ ಬೈಕ್ ಪತ್ತೆಯಾಗಿದ್ದು ರಸ್ತೆಯ ಪಕ್ಕದಲ್ಲಿ ಬೈಕ್ ನಿಲ್ಲಿಸಿದ್ದ ವೇಳೆ ಪರಿಶೀಲನೆ ನಡೆಸಿದಾಗ ಆತ್ಮಹತ್ಯೆಗೆ ಯತ್ನಿಸುವುದನ್ನು ಕಂಡು ಪೆರೇಸಂದ್ರ ಪೊಲೀಸ್ ಠಾಣೆಯ ಪಿಎಸ್ಐ ಜಗದೀಶ್ ರೆಡ್ಡಿ ಹಾಗೂ ಸಿಬ್ಬಂದಿ ಪಾಲಿಡಾಲ್ ಕುಡಿದಿದ್ದ ರಾಮಾಂಜಿಯನ್ನು ಭುಜದ ಮೇಲೆ ಎತ್ತಿಕೊಂಡು ರಕ್ಷಣೆ ಮಾಡಿದ್ದಾರೆ.

ಬೈಕ್ ಆದರಿಸಿ ಅರಣ್ಯ ಪ್ರದೇಶದಲ್ಲಿ ತನಿಖೆ ಮಾಡಿದ್ದ ಪೆರೇಸಂದ್ರ ಪಿಎಸ್ಐ ಮಾಹಿತಿ ಕಲೆಹಾಕಿದಾಗ ಪತ್ನಿ ಜೊತೆ ಗಲಾಟೆ ಮಾಡಿಕೊಂಡು ಆತ್ಮಹತ್ಯೆಗೆ ರಾಮಾಂಜಿ ಯತ್ನಿಸಿರುವುದು ತಿಳಿದಿದೆ. ಚಿಕ್ಕಬಳ್ಳಾಪುರ ತಾಲೂಕಿನ‌ ಪೆರೇಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸದ್ಯ ರಾಮಾಂಜಿ ಪ್ರಾಣಾಪಾಯದಿಂದ ಪಾರಾಗಿದ್ದು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular