Thursday, November 6, 2025
Flats for sale
Homeರಾಜ್ಯಚಿಕ್ಕಬಳ್ಳಾಪುರ : ಭೀಕರ ರಸ್ತೆ ಅಪಘಾತ : 6 ಜನ ಸ್ಥಳದಲ್ಲೇ ಸಾವು.

ಚಿಕ್ಕಬಳ್ಳಾಪುರ : ಭೀಕರ ರಸ್ತೆ ಅಪಘಾತ : 6 ಜನ ಸ್ಥಳದಲ್ಲೇ ಸಾವು.

ಚಿಕ್ಕಬಳ್ಳಾಪುರ : ಭೀಕರ ರಸ್ತೆ ಅಪಘಾತದಲ್ಲಿ 6 ಮಂದಿ ಮೃತಪಟ್ಟ ಘಟನೆ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಶಿಂಗನಮಲ ಮಂಡಲ ನಾಯನಪಲ್ಲಿ ಕ್ರಾಸ್ ಬಳಿ ನಡೆದಿದೆ.

ಕಾರಿನ ಟೈರ್ ಸಿಡಿದು ಲಾರಿಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಮೃತಪಟ್ಟವರನ್ನು ಸಂತೋಷ್, ಷಣ್ಮುಖ, ವೆಂಕನ್ನ, ಶ್ರೀಧರ್, ಪ್ರಸನ್ನ ಹಾಗೂ ವೆಂಕಿ ಎಂದು ತಿಳಿದುಬಂದಿದೆ . ಮೃತರೆಲ್ಲ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಎಂದು ತಿಳಿದಿದೆ.

ತಾಡಿಪತ್ರಿಯಿಂದ ಅನಂತಪುರಕ್ಕೆ ಕಾರು ಬರುತ್ತಿತ್ತು ಎನ್ನಲಾಗಿದೆ. ತಾಡಿಪತ್ರಿ ನಗರದಲ್ಲಿ ಸಂಕೀರ್ತನೆ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಹೀಗಾಗಿ ಅಲ್ಲಿಗೆ ತೆರಳಿದ್ದರು ಎಂದು ತಿಳಿದುಬಂದಿದೆ. ಅಪಘಾತದ ಭೀಕರತೆಗೆ ಕಾರು ಪುಡಿಪುಡಿ ಆಗಿದ್ದು ಮೃತರು ಅನಂತಪುರದ ಇಸ್ಕಾನ್ ಸಂಸ್ಥೆಗೆ ಸೇರಿದವರೆಂದು ತಿಳಿದುಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular