ಚಳ್ಳಕೆರೆ : ಮುಸ್ಲಿಂ ಬಾಂಧವರು ಮಹಮದ್ ಪೈಗಂಬರ್ ಜನ್ಮದಿನವಾದ ಈದ್ಮಿಲಾದ್ ಮೆರವಣಿಗೆಗೆ ಶಾಸಕ ಟಿ ರಘುಮೂರ್ತಿ ಚಾಲನೆ ನೀಡಿದರು ನಗರ ಹಾಗೂ ತಾಲ್ಲೂಕಿನಲ್ಲಿ ಸಡಗರ ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ಮುಸ್ಲಿಂ ಬಾಂಧವರು ಹಬ್ಬವನ್ನು ಆಚರಿಸಿದರು.
ಮುಸ್ಲಿಂ ಬಾಂಧವರು ಹೊಸ ಬಟ್ಟೆಗಳನ್ನು ಧರಿಸಿ ಸಂತಸದಿಂದ ಗಾಂಧಿನಗರದಿಂದ ನಗರದ ಮದೀನಾ ಮಸೀದಿ ಯಿಂದ ನೆಹರು ಸರ್ಕಲ್ ವರೆಗೂ ಮೆರವಣಿಗೆ ನಡೆಯಿತು
ಈ ಸಂದರ್ಭದಲ್ಲಿ ನಗರ ಭಾಗದ ಎಲ್ಲಾ ಮಸೀದಿಗಳ ಅಧ್ಯಕ್ಷರುಗಳು ಉಪಾಧ್ಯಕ್ಷರುಗಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.


