ಗದಗ : ಕ್ರೂಸರ್, ಕ್ಯಾಂಟರ್ ಮಧ್ಯ ಡಿಕ್ಕಿ ಸಂಭವಿಸಿದ ಹಿನ್ನೆಲೆ ಮೂವರು ಸ್ಥಳದಲ್ಲೇ ಸಾವನಪ್ಪಿದ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನ ಜಿಗಳೂರು ಬಳಿ ನಡೆದಿದೆ.ಘಟನೆಯಲ್ಲಿ ಮರಿಯಂಬು ಹುನಗುಂದ (55) ಅನ್ನಪೂರ್ಣ ಚಂಗಳಿ (45) ಸುಜಾತಾ ಹೊಸಮನಿ (30) ಸಾವನ್ನಪ್ಪಿದ್ದಾರೆ .
ಗಜೇಂದ್ರಗಡ ದಿಂದ ರೋಣಕ್ಕೆ ಹೊರಟಿದ್ದ ಕ್ರೋಸರ್, ರೋಣದಿಂದ ಗಜೇಂದ್ರಗಡ ಕಡೆಗೆ ಹೊರಟಿದ್ದ ಕ್ಯಾಂಟರ್ ಮಧ್ಯ ಡಿಕ್ಕಿ ಸಂಭವಿಸಿದೆ.
ಡಿಕ್ಕಿ ರಭಸಕ್ಕೆ ಕ್ರೂಸರ್ ನಲ್ಲಿದ್ದ ಮೂವರು ಕೃಷಿ ಕಾರ್ಮಿಕರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.ಕಡಲೆ ಕೀಳಲು ಹೊರಟ್ಟಿದ್ದ ಕಾರ್ಮಿಕರ ದುರ್ಮರಣವಾಗಿದ್ದು ಗಾಯಾಳುಗಳನ್ನ ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಸ್ಥಳಕ್ಕೆ ರೋಣ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.


