ಖಾನಾಪುರ : ತಾಲೂಕಿನ ಹಸಿವಾಡಿ ಗ್ರಾಮದ ಬಳಿ ಇರುವಂತ ಹೊಲದಲ್ಲಿ ಶನಿವಾರ ಸಂಜೆ 4.00 ಗಂಟೆ ಸುಮಾರಿಗೆ ಹುಲಿ ಕಾಣಿಸಿಕೊಂಡಿತ್ತು. ಇದರಿಂದ ಗದ್ದೆಯಲ್ಲಿ ಕೆಲಸ ಮಾಡುವ ರೈತರಲ್ಲಿ ಆತಂಕ ಮನೆ ಮಾಡಿದೆ. ಈ ಭಾಗದಲ್ಲಿ ಆನೆ, ಕಾಡುಹಂದಿ, ಕರಡಿ, ಹುಲಿಗಳ ಹಾವಳಿ ಹೆಚ್ಚಾಗಿದ್ದು, ಮೊದಲ ಬಾರಿಗೆ ಹುಲಿ ಕಾಣಿಸಿಕೊಂಡು ನಾಗರಿಕರಲ್ಲಿ ಆತಂಕ ಮೂಡಿಸಿದೆ.
ಈ ಕುರಿತು ಹೆಚ್ಚಿನ ಮಾಹಿತಿ ಏನೆಂದರೆ ಹಲಶಿವಾಡಿ ಗ್ರಾಮದಿಂದ ಗುಂಡುಪಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಅರ್ಧ ಕಿಲೋಮೀಟರ ದೂರದಲ್ಲಿರುವ ವಯಂಗಾನ್ ಜಮೀನಿನಲ್ಲಿ ಶನಿವಾರ ಸಂಜೆ 4.00 ಗಂಟೆ ಸುಮಾರಿಗೆ ಹುಲಿ ಅತಿವೇಗದಿಂದ ಗದ್ದೆಗೆ ನುಗ್ಗಿದೆ. ರಮೇಶ ದೇಸಾಯಿ ಎಂಬ ರೈತ ತನ್ನ ಜಮೀನಿಗೆ ತೆರಳುತ್ತಿದ್ದಾಗ ಅವರ ಎದುರೇ ಕಾಣಿಸಿಕೊಂಡಿದೆ.
ಅನೇಕ ರೈತರು ಗದ್ದೆಗಳಲ್ಲಿ ಕಬ್ಬು ಹಚ್ಚುವ ಕಾರ್ಯದಲ್ಲಿ ತೊಡಗಿದ್ದರು. ಹುಲಿಯ ಕಿರುಚಾಟ ಕೇಳಿದ ತಕ್ಷಣ ಎಲ್ಲರ ಕಣ್ಣು ಅದರತ್ತ ತಿರುಗಿದ್ದು, ಹೆಸ್ಕಾಂ ಕಚೇರಿಯಿಂದ ಈ ಜಾಗದಲ್ಲಿ ವಿದ್ಯುತ್ ತಂತಿಗಳ ಕೆಲಸವೂ ಆರಂಭವಾಗಿದೆ. ಅವರೂ ಕಿರುಚಿದ್ದರಿಂದ ಹುಲಿ ಇಲ್ಲಿಂದ ಅಲ್ಲಿಗೆ ಓಡುತ್ತಲೇ ಇತ್ತು. ಹುಲಿ ಸಂಪೂರ್ಣವಾಗಿ ಬೆಳೆದಿಲ್ಲ ಆದರೆ ಸಣ್ಣ ‘ಕರು’ ಎಂದು ಗೊತ್ತಾಗಿದ್ದು ಆದರೆ ಈ ಹುಲಿ ಪ್ರತ್ಯಕ್ಷವಾಗಿ ಇಡೀ ಪ್ರದೇಶದಲ್ಲಿ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.


