Thursday, March 12, 2026
Flats for sale
Homeಜಿಲ್ಲೆಕುಂದಾಪುರ: ಅರಸಿನಗುಂಡಿ ಜಲಪಾತದಲ್ಲಿ ಯುವಕ ಕಾಲು ಜಾರಿ ನಾಪತ್ತೆ.

ಕುಂದಾಪುರ: ಅರಸಿನಗುಂಡಿ ಜಲಪಾತದಲ್ಲಿ ಯುವಕ ಕಾಲು ಜಾರಿ ನಾಪತ್ತೆ.

ಕುಂದಾಪುರ : ಜುಲೈ 23 ರಂದು ಕೊಲ್ಲೂರಿನ ಅರಶಿನಗುಂಡಿ ಜಲಪಾತವನ್ನು ಸ್ನೇಹಿತನೊಂದಿಗೆ ವೀಕ್ಷಿಸಲು ಬಂದಿದ್ದ ಭದ್ರಾವತಿಯ ಯುವಕನೊಬ್ಬ ಜೋರಾದ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ.

ಶರತ್ ಕುಮಾರ್ (23) ಮೃತ ವ್ಯಕ್ತಿ. ಶರತ್ ತನ್ನ ಸ್ನೇಹಿತ ಗುರುರಾಜ್ ಜತೆ ಕಾರಿನಲ್ಲಿ ಜಲಪಾತ ನೋಡಲು ಬಂದಿದ್ದರು. ಬಂಡೆಯ ಮೇಲೆ ನಿಂತು ಎತ್ತರದಿಂದ ನೀರು ಬೀಳುವ ದೃಶ್ಯವನ್ನು ಶರತ್ ಆನಂದಿಸುತ್ತಿದ್ದಾಗ ಏಕಾಏಕಿ ಸಮತೋಲನ ಕಳೆದುಕೊಂಡು ನೀರಿನಲ್ಲಿ ಕೊಚ್ಚಿಹೋದರು.

ಆತನ ಸ್ನೇಹಿತ ಗುರುರಾಜ್ ಕೂಡಲೇ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಕೂಡಲೇ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಮುಳುಗು ತಜ್ಞ ಈಶ್ವರ ಮಲ್ಪೆ ಮತ್ತು ಅವರ ತಂಡದ ಸಹಾಯದಿಂದ ಹುಡುಕಾಟ ಆರಂಭಿಸಲಾಯಿತು.

ಇದುವರೆಗೂ ಮೃತದೇಹ ಸಿಕ್ಕಿಲ್ಲ. ಗುರುರಾಜ್ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ಶರತ್ ಸ್ವಯಂ ಉದ್ಯೋಗಿಯಾಗಿದ್ದ. ಭಾರೀ ಮಳೆಯ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಜಲಪಾತಕ್ಕೆ ಭೇಟಿ ನೀಡುವುದನ್ನು ನಿಷೇಧಿಸಲಾಗಿದೆ. ಜಲಪಾತದ ಪ್ರವೇಶ ದ್ವಾರದಲ್ಲಿ ಅರಣ್ಯ ಸಿಬ್ಬಂದಿ ಇರುವುದನ್ನು ಗಮನಿಸಿದ ಗೆಳೆಯರಿಬ್ಬರು ವಿಧಿಯಾಟಕ್ಕೆ ಬೇರೊಂದು ಮಾರ್ಗವಾಗಿ ಸ್ಥಳಕ್ಕೆ ತೆರಳಿ ಅವರಲ್ಲಿ ಒಬ್ಬನ ಪ್ರಾಣ ಕಿತ್ತುಕೊಂಡಿದ್ದಾರೆ.

ಗುರುರಾಜ್ ತನ್ನ ಸ್ನೇಹಿತ ಜಲಪಾತವನ್ನು ಆನಂದಿಸುತ್ತಿದ್ದ ಕ್ಷಣಗಳನ್ನು ಸೆರೆಹಿಡಿಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
RELATED ARTICLES

LEAVE A REPLY

Please enter your comment!
Please enter your name here

Most Popular