ಉಳ್ಳಾಲ : ಉಳ್ಳಾಲ ಸಮೀಪದ ಕೊಲ್ಯ ಕನೀರುತೋಟದಲ್ಲಿ ಯುವಕನೊಬ್ಬ ನಿದ್ರೆಯಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ಜಿತೇಶ್ (28) ಮೃತ ವ್ಯಕ್ತಿ. ಸೋಮವಾರ ರಾತ್ರಿ ಊಟ ಮುಗಿಸಿ ಎಂದಿನಂತೆ ಮಲಗಿದ್ದರು. ಆದರೆ ಮಂಗಳವಾರ ಬೆಳಗ್ಗೆ ಅವರು ನಿರ್ಜೀವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಜೀತೇಶ್ ಮಂಗಳೂರಿನ ಕೆಟಿಎಂ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದು, ಕರೋನಾ ಸಾಂಕ್ರಾಮಿಕ ಸಮಯದಲ್ಲಿ ಪಂಡಿತ್ ಹೌಸ್ ನಿವಾಸಿ ಹುಡುಗಿಯನ್ನು ಮದುವೆಯಾಗಿದ್ದರು. ಅವರು ಪತ್ನಿ, ಪೋಷಕರು, ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ.


