ಉಡುಪಿ : ಮುಂಬರುವ ಕನ್ನಡ ಚಿತ್ರ ‘ಕಾಂತಾರ: ಚಾಪ್ಟರ್ 1’ ಚಿತ್ರೀಕರಣದ ವೇಳೆ ಕಿರಿಯ ಕಲಾವಿದರೊಬ್ಬರು ಉಡುಪಿ ಜಿಲ್ಲೆಯ ಸೌಪರ್ಣಿಕಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದು, ಚಿತ್ರೀಕರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು ಇದಾದ ಬಳಿಕ ಕೆಲವೇ ದಿನದಲ್ಲಿ ಮತ್ತೋರ್ವ ಕಲಾವಿದ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಈ ಮೊದಲು ಮೃತ ಕಲಾವಿದನನ್ನು ಎಂ ಎಫ್ ಕಪಿಲ್ ಎಂದು ಗುರುತಿಸಲಾಗಿತ್ತು ಬುಧವಾರ ಈಜಲು ನದಿಗೆ ಇಳಿದಿದ್ದ ಎಂ ಎಫ್ ಕಪಿಲ್ ಅವರು ಬಲವಾದ ಪ್ರವಾಹದಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದರು .ಆದರೆ ನಿನ್ನೆ ಮತ್ತೋರ್ವ ಕಲಾವಿದ ರಾಕೇಶ್ ಪೂಜಾರಿ ಮೃತಪಟ್ಟಿರುವುದು ಚಿತ್ರರಂಗಕ್ಕೆ ದಿಗಿಲು ಬಡಿದಂತಾಗಿದೆ.
ಕಾಂತಾರ 1 ಸಿನಿಮಾದ ಚಿಕ್ಕ ಪಾತ್ರದಲ್ಲಿ ನಟಿಸಿದ್ದ ರಾಕೇಶ್ ಪೂಜಾರಿ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಸಿನಿಮಾದಲ್ಲಿ ಅವರು ಸಣ್ಣ ಪಾತ್ರದಲ್ಲಿ ನಟಿಸಿದ್ದರು. ಆದರೆ, ಸಿನಿಮಾ ಮುಗಿದು ಒಂದು ತಿಂಗಳ ನಂತರ ಅವರು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಅವರಿಗೆ ಹೃದಯಾಘಾತ ಸಂಭವಿಸಿದೆ. 20 ಕಿಲೊಮೀಟರ್ ದೂರದಲ್ಲಿ ಚಿತ್ರೀಕರಣ ನಡೆಯುತ್ತಿರುವ ಸಂದರ್ಭದಲ್ಲಿ ಯಾವನು ಒಬ್ಬ ಕೂಡ ಬಂದು ಸಾಂತ್ವನ ಹೇಳದೆ ಇರುವುದು ರಾಕೇಶ್ ಪೂಜಾರಿ ಯವರ ಆಪ್ತ ವಲಯಗಳಿಗೆ ಬೇಸರ ಉಂಟುಮಾಡಿದೆ ಎಂದು ತಿಳಿಸಿದ್ದಾರೆ.
ಇನ್ನು ಕಾಂತಾರ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಸಾಲು ಸಾಲು ದುರಂತಗಳು ಸಂಭವಿಸಿವೆ ಎನ್ನುವ ಆರೋಪದ ನಡುವೆಯೇ ಚಿತ್ರತಂಡವು ಈ ಬಗ್ಗೆ ಸ್ಪಷ್ಟನೆ ನೀಡಿದೆ. ಕಾಂತಾರದಿಂದ ಈ ದುರಂತವಾಗಿಲ್ಲ. ಶೂಟಿಂಗ್ ಮಾಡುವ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳು ಆಗಿಲ್ಲ. ಚಿತ್ರದ ಚಿತ್ರೀಕರಣವು ಕೊನೆಯ ಹಂತದಲ್ಲಿದ್ದು, ವಿಜಯದಶಮಿಗೆ ಕಾಂತಾರ ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡವು ಸ್ಪಷ್ಟನೆ ನೀಡಿದೆ. ಕಾಂತಾರ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಆದರೆ ಇದರ ಎರಡನೇ ಭಾಗ ಬಿಡುಗಡೆಗೆ ಸಂಕಷ್ಟ ಸೃಷ್ಟಿಯಾಗಿದೆ. ಮುಂದುವರಿದು ಚಿತ್ರದ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಸಂಕಷ್ಟ ಇದೆ ಎಂದು ಈ ಹಿಂದೆ ಪಂಜುರ್ಲಿ ದೈವದ ಮುನ್ಸೂಚನೆ ಸಹ ಭಾರೀ ಚರ್ಚೆಗೆ ಕಾರಣವಾಗಿತ್ತು ಒಟ್ಟಿನಲ್ಲಿ ಕಾಂತಾರ-1 ಸಿನಿಮಾ ತಂಡಕ್ಕೆ ಕಂಟಕವಾಗಿರುವುದಂತೂ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.