Tuesday, February 4, 2025
Flats for sale
Homeರಾಜ್ಯಶಿವಮೊಗ್ಗ ; ಪತಿ ಮೃತಪಟ್ಟ ಸುದ್ದಿ ತಿಳಿದು ಪತ್ನಿ ಆತ್ಮಹತ್ಯೆ ಗೆ ಶರಣು…!

ಶಿವಮೊಗ್ಗ ; ಪತಿ ಮೃತಪಟ್ಟ ಸುದ್ದಿ ತಿಳಿದು ಪತ್ನಿ ಆತ್ಮಹತ್ಯೆ ಗೆ ಶರಣು…!

ಶಿವಮೊಗ್ಗ : ಅಪಘಾತದಲ್ಲಿ ಪತಿ ಮೃತಪಟ್ಟ ಸುದ್ದಿ ತಿಳಿದು ಆತಂಕಗೊಂಡ ಪತ್ನಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಿಲ್ಲೆ ಕ್ಯಾತರ ಕ್ಯಾಂಪ್‌ನಲ್ಲಿ ನಡೆದಿದೆ. ಮಂಜುನಾಥ್(25), ಅಮೃತ (21) ಮೃತ ದುರ್ದೆವಿಗಳು.

ಮಂಜುನಾಥ್ ಜ.31 ರಂದು ಬೈಕ್‌ನಲ್ಲಿ ಹೋಗು ವಾಗ ಶಿಕಾರಿಪುರದ ಬಳಿ ಅಪಘಾತ ನಡೆದು ತೀವ್ರವಾಗಿ ಗಾಯಗೊಂಡಿದ್ದರು. ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿ ಸದೇ ನಿನ್ನೆ ಮೃತಪಟ್ಟಿದ್ದಾರೆ.

ಈ ವಿಷಯ ತಿಳಿಯುತ್ತಿದಂತೆ ಮನನೊಂದ ಪತ್ನಿ ಅಮೃತ ಮನೆಗೆ ಬಂದು ತನ್ನ ವೇಲಿನಿಂದ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕಳೆದ ವರ್ಷ ಮಂಜುನಾಥ್ ಹಾಗೂ ಅಮೃತ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು ಆದರೆ ವಿಧಿಯಾಟಕ್ಕೆ

ಬಲಿಯಾಗಿದ್ದಾರೆ. ದಂಪತಿ ಸಾವಿನಿಂದ ಕುಟುಂಬಸ್ತರ ಆಕ್ರಂದನ ಮುಗಿಲುಮುಟ್ಟಿದೆ. ಹೊಸನಗರ ಠಾಣೆ ಪೊಲೇ ಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular