ಮಂಗಳೂರು ; ಮೊಂಟೆಪದವು ಕೋಡಿಯಲ್ಲಿ ಮನೆಯ ಮೇಲೆ ಗುಡ್ಡ ಕುಸಿತ ಹಿನ್ನೆಕೆ ಅವಶೆಷದಡಿ ಸ ತಾಯಿಮಗು ಸಿಲುಕಿರುವ ಘಟನೆ ನಡೆದಿದೆ.
ಸ್ಥಳಕ್ಕೆ ಯಾವುದೇ ತೆರವು ಕಾರ್ಯಕ್ಕೆ ವಾಹಗಳ ಸಾಧ್ಯವಾಗದ ಹಿನ್ನೆಲೆ ರಕ್ಷಣಾಕಾರ್ಯಚರಣೆಗೆ ಮಳೆ ಅಡ್ಡಿ ಉಂಟಾಗಿದೆ. ಮಳೆ ಹಾಗೂ ಇಕ್ಕಟ್ಟಿನ ಜಾಗವಾದ ಹಿನ್ನೆಲೆ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದ್ದು ಮನೆಯೊಳಗೆ ಸಿಲುಕಿಕೊಂಡಿರುವ ತಾಯಿ ಮಗು ಜೀವನ್ಮರಣ ಸ್ಥಿತಿಯಲ್ಲಿದ್ದಾರೆ.
ಒಂದು ಮಗು ಮೃತ ಮಟ್ಟಿದ್ದು ಮತ್ತೊಂದು ಮಗು ಹಾಗೂ ತಾಯಿ ಅಸ್ವಸ್ಥ ಸ್ಥಿತಿಯಲ್ಲಿದ್ದಾರೆ. ಮಗುವನ್ನು ರಕ್ಷಣೆ ಮಾಡಿ ಎನ್ನುತ್ತಿರುವ ತಾಯಿ ಅಂಲಾಚುತ್ತಿದ್ದು ಪರಿಸ್ಥಿತಿ ಹದಗೆಟ್ಟು ಹೋಗಿದೆ.
ಮನೆಯೊಳಗೆ ಮತ್ತೊಂದು ಮಹಿಳೆ ಮೃತಪಟ್ಟಿದ್ದು ಸ್ಥಳೀಯರಿಂದ ಕಾಂತಪ್ಪ ಪೂಜಾರಿ ಅವರ ರಕ್ಷಣೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗ ಸೀತಾರಾಂ ಅಪಾಯದಿಂದ ಪಾರಾಗಿದ್ದು ತಡರಾತ್ರಿ ಈ ಘಟನೆ ನಡೆದಿದೆ
ಕುಸಿತದ ಶಬ್ದ ಕೇಳಿ ಮನೆಯಿಂದ ಸೀತಾರಾಂ ಹೊರಬಂದಿದ್ದು ಸ್ಥಳೀಯರು ಹಾಗೂ ಎನ್ ಡಿಆರ್ ಎಫ್, ಎಸ್ ಡಿ ಆರ್ ಎಫ್, ಪೊಲೀಸರಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.


