ಮಂಗಳೂರು : ಸಮಾಜ ಸೇವಾ ಸಹಕಾರ ಸಂಘ ನಿ. ಬಂಟ್ವಾಳ, ದಕ್ಷಿಣ ಕನ್ನಡ ಜಿಲ್ಲೆ ಇದರ ಎಲ್ಲಾ ಆಡಳಿತ ಮಂಡಳಿ ನಿರ್ದೇಶಕರುಗಳನ್ನು ಅಮಾನತುಗೊಳಿಸಿ ಸಹಕಾರ ಸಂಘಗಳ ಜಂಟಿ ನಿಬಂಧಕರು, ಮೈಸೂರು/ಪ್ರಾಂತ, ಮೈಸೂರು ಇವರು ಆದೇಶಿಸಿದ್ದಾರೆ.
ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959, ಪ್ರಕರಣ 29ಸಿ ರಡಿ ಕ್ರಮ ಕೈಗೊಳ್ಳುವ ಬಗ್ಗೆ ಶ್ರೀ ಡಿ.ಲೋಕನಾಥ್ ಮತ್ತು ಇತರೆ ಐದು ಸದಸ್ಯರು ದಿನಾಂಕ: 22-11-2024 ರಂದು ಸಲ್ಲಿಸಿದ ದೂರು ಅರ್ಜಿ ಸಲ್ಲಿಸಿದ್ದು ವಿಚಾರಣೆ ನಡೆಸಿದ ಜಂಟಿ ನಿಬಂಧಕರು ಈ ಆದೇಶ ಹೊರಡಿಸಿದ್ದಾರೆ.
01-09-2024ರಂದು ನಡೆಸಿದ ಸರ್ವ ಸದಸ್ಯರ ಸಭೆಯಲ್ಲಿ ಬೈಲಾ ಸಮಗ್ರ ತಿದ್ದುಪಡಿಯನ್ನು ಮಂಡಿಸಿ ಅನುಮೋದನೆಯನ್ನು ಪಡೆಯಲಾಗಿದ್ದು, ಈ ಕ್ರಮದಲ್ಲಿ ನಿಯಮಗಳ ಉಲ್ಲಂಘನೆಯಾಗಿರುವುದಾಗಿ ದೂರರ್ಜಿದಾರರು ಆಕ್ಷೇಪಿಸಿ ಆಡಳಿತ ಮಂಡಳಿಯ ವಿರುದ್ಧ ಕ್ರಮಕೈಗೊಳ್ಳ ಬೇಕೆಂದು ದೂರು ನೀಡಲಾಗಿತ್ತು. ಸಂಘದ ಬೈಲಾಗೆ ತರಲಾಗುತ್ತಿರುವ ತಿದ್ದುಪಡಿಯ ಬಗ್ಗೆ ಸದಸ್ಯರಿಗೆ ಮಾಹಿತಿಯನ್ನು ನೀಡದೇ ಸಭೆಯಲ್ಲಿ ತಿದ್ದುಪಡಿಯ ಬಗ್ಗೆ ಚರ್ಚಿಸಲು ಅವಕಾಶವನ್ನು ನೀಡದಿರುವುದು, ಸಂಘದ ಆಡಳಿತ ಮಂಡಳಿಯವರು ಸರ್ವ ಸದಸ್ಯರ ಸಭೆಯನ್ನು ನಡೆಸುವ ಪೂರ್ವದಲ್ಲಿ ಮತದಾನದ ಹಕ್ಕುಳ್ಳ ಸದಸ್ಯರ ಪಟ್ಟಿಯನ್ನು ಸಿದ್ಧಪಡಿಸಿ ಸಹಕಾರ ನಿಯಮ ಪಾಲಿಸುವಲ್ಲಿ ವಿಫಲರಾಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959, ಪ್ರಕರಣ 29ಸಿ(8)(ಬಿ)ರಡಿ ಹಾಗೂ ಸರ್ಕಾರದ ಅಧಿಸೂಚನೆ ಅನ್ವಯ ಸಂಖ್ಯೆ : ಸಿಒ/71/ಸಿಎಲ್ಎಂ/2016 ದಿನಾಂಕ: 06-12-2016ರ ರೀತ್ಯಾ ಪ್ರತ್ಯಾಯೋಜನೆಗೊಂಡ ಅಧಿಕಾರದ ಮೇರೆಗೆ ಸಿ.ಪ್ರಸಾದ್ ರೆಡ್ಡಿ, ಸಹಕಾರ ಸಂಘಗಳ ಜಂಟಿ ನಿಬಂಧಕರು, ಮೈಸೂರು ಪ್ರಾಂತ, ಮೈಸೂರು ಆವರು ಸಮಾಜ ಸೇವಾ ಸಹಕಾರಿ ಸಂಘದ 16 ನಿರ್ದೇಶಕರನ್ನು ಅಧಿಕಾರದಿಂದ ಅಮಾನತುಗೊಳಿಸಿದ್ದಾರೆ.
ಅಮಾನತುಗೊಂಡವರ ವಿವರ ಇಲ್ಲಿದೆ.
1) ಶ್ರೀ ಸುರೇಶ್ ಕುಲಾಲ್- ಅಧ್ಯಕ್ಷರು/ನಿರ್ದೇಸಕರು
2) ಶ್ರೀ ಪದ್ಮನಾಭ ವಿಟ್ಲ – ಉಪಾಧ್ಯಕ್ಷರು/ನಿರ್ದೇಶಕರು
3) ಶ್ರೀ ವಿಶ್ವನಾಥ ಕೆ.ಬಿ. ನಿರ್ದೇಶಕರು
4) ಶ್ರೀ ಜನಾರ್ಧನ ಬೊಂಡಾಲ ನಿರ್ದೇಶಕರು
5) ಶ್ರೀ ವಿಜಯಕುಮಾರ್ ವಿ.-ನಿರ್ದೇಶಕರು
6) ಶ್ರೀ ಅರುಣ್ ಕುಮಾರ್ ಕೆ.-ನಿರ್ದೇಶಕರು
7) ಶ್ರೀ ರಮೇಶ್ ಸಾಲ್ಯಾನ್ ಬಿ.-ನಿರ್ದೇಶಕರು
8) ಶ್ರೀ ಸತೀಶ ನಿರ್ದೇಶಕರು
9)ಶ್ರೀ ಎನ್.ಸುರೇಶ್ ನಿರ್ದೇಶಕರು
10) ಶ್ರೀ ರಮೇಶ್ ಸಾಲ್ಯಾನ್ ನಿರ್ದೇಶಕರು
11) ಶ್ರೀ ನಾಗೇಶ್ ಬಿ . ನಿರ್ದೇಶಕರು
12) ಶ್ರೀಮತಿ ಜಯಂತಿ ನಿರ್ದೇಶಕರು
13) ಶ್ರೀಮತಿ ವಿದ್ಯಾ ನಿರ್ದೇಶಕರು
14) ಶ್ರೀಮತಿ ವಿಜಯಲಕ್ಷ್ಮೀ ನಿರ್ದೇಶಕರು
15) ಶ್ರೀ ಜಗನ್ನಿವಾಸಗೌಡ ನಿರ್ದೇಶಕರು
16) ಶ್ರೀ ಎಂ.ಕೆ.ಗಣೇಶ್ ಸಮಗಾರ- ನಿರ್ದೇಶಕರು


