ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣ ಇದೀಗ ದಿನದಿಂದ ದಿನಕ್ಕೆ ಒಂದೊಂದು ಆಶ್ಚರಿ ಮೂಡಿಸುತ್ತಲೇ ಇದೆ. ಬಂಗ್ಲೆ ಗುಡ್ಡೆಯಲ್ಲಿ ಮಾನವ ಅಸ್ಥಿಪಂಜರಗಳನ್ನು ಸಂಗ್ರಹಿಸುವ ಕಾರ್ಯಾಚರಣೆಯು ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣವನ್ನು ತನಿಖೆ ಮಾಡುತ್ತಿರುವ ವಿಶೇಷ ತನಿಖಾ ತಂಡ (SIT) ಆಕಸ್ಮಿಕ ಸಂಶೋಧನೆ ನಡೆಸಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ ಧರ್ಮಸ್ಥಳ ಬುರುಡೆ ಪ್ರಕರಣಕ್ಕೆಇದೀಗ ಮತ್ತೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಎರಡು ವಿಭಿನ್ನ ದಿನಗಳಲ್ಲಿ ನಡೆದ ಮಹಜರುಗಳ ಸಮಯದಲ್ಲಿ, SIT ಅಧಿಕಾರಿಗಳು ಬಂಗಲೆ ಗುಡ್ಡೆಯಲ್ಲಿ ಭೂಮಿಯ ಮೇಲ್ಮೈಯಲ್ಲಿ ಅಸ್ಥಿಪಂಜರಗಳ ಅವಶೇಷಗಳನ್ನು – ವಿಶೇಷವಾಗಿ ತಲೆಬುರುಡೆಗಳನ್ನು – ಪತ್ತೆಹಚ್ಚ್ಚಿದ್ದಾರೆಂದು ಮೂಲಗಳು ತಿಳಿಸಿವೆ. ಇದು ಅಸ್ಥಿಪಂಜರಗಳನ್ನು ಸಂಗ್ರಹಿಸಲು ದೊಡ್ಡ ಪ್ರಮಾಣದ ಕಾರ್ಯಾಚರಣೆಯನ್ನು ಪ್ರಾರಂಭಿಸಲು ತಂಡವನ್ನು ಪ್ರೇರೇಪಿಸಿದ್ದು . “ಈಗ, ಹಲವಾರು ತಲೆಬುರುಡೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ಪೂರ್ಣಗೊಂಡ ನಂತರವೇ ನಿಖರವಾದ ಸಂಖ್ಯೆ ತಿಳಿಯಲಿದ್ದು . ಬಹು ತಂಡಗಳು ವಿವಿಧ ಸ್ಥಳಗಳಿಂದ ಮೂಳೆಗಳು ಮತ್ತು ತಲೆಬುರುಡೆಗಳನ್ನು ಎತ್ತಿಕೊಂಡಿವೆ ಎಂದು ತಿಳಿದುಬಂದಿದೆ.
ಮೊದಲಿಗೆ ಮೂಳೆಗಳು ಪತ್ತೆಯಾಗಿದ್ದು . ಬಳಿಕ ಮಾನವನ ಅಸ್ಥಿಪಂಜರ ಹಾಗೂ ತಲೆ ಬುರುಡೆ ಪತ್ತೆಯಾಗಿದೆ, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಅದ್ಯಾಯ ಶುರುವಾಗಿದೆ.ಮಹಜರುಗಳ ಸಮಯದಲ್ಲಿ ಗುರುತಿಸಲಾದ ಎರಡು ಸ್ಥಳಗಳನ್ನು ಮಾತ್ರವಲ್ಲದೆ, ಇಡೀ ಬಂಗಲೆ ಗುಡ್ಡೆ ಅರಣ್ಯ ಪ್ರದೇಶವನ್ನು ಎಸ್ಐಟಿ ಶೋಧಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಸ್ಥಳಗಳನ್ನು ವಿಠಲ್ ಗೌಡ ತೋರಿಸದೆ, ಎಸ್ಐಟಿ ಪತ್ತೆ ಮಾಡಿದೆ. ಹುಡುಕಾಟದ ಸಮಯದಲ್ಲಿ ಎಸ್ಐಟಿ ಬಟ್ಟೆ, ಚೀಲಗಳು ಮತ್ತು ಇತರ ವಸ್ತುಗಳನ್ನು ಸಹ ವಶಪಡಿಸಿಕೊಂಡಿದೆ.
ಇನ್ನೂ ಪತ್ತೆ ಆದ ಕಳೇಬರಹವನ್ನು , ಬಕೆಟ್ ನಲ್ಲಿ ಮೂಳೆ, ತಲೆಬುರುಡೆ ತುಂಬಿಕೊಂಡ ಎಸ್ಐಟಿ, ಪಿವಿಸಿ ಪೈಪ್ನ್ನ ಸೀಲ್ ಮಾಡಿ ಕಾಡಿನಿಂದ ಹೊರಗೆ ತಂದಿದ್ದಾರೆ. ಮೇಲ್ಭಾಗದಲ್ಲೇ ಅಸ್ಥಿಪಂಜರ ಸಂಗ್ರಹ ಮಾಡಿದ್ರಿಂದ ಈ ಸಂದರ್ಭದಲ್ಲಿ ಕೇವಲ ತನಿಖಾಧಿಕಾರಿಗಳು ಮಾತ್ರ ಇದ್ದರು.ಅರಣ್ಯ ಇಲಾಖೆ ಅನುಮತಿ ನೀಡ್ತಿದ್ದಂತೆ 3 ತಂಡ ಮಾಡಿಕೊಂಡ ಎಸ್ಐಟಿ, ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟ ಬಳಿ ಕಾಡಿನೊಳಗೆ ಮತ್ತೆ ಮೂಳೆ, ಕಳೇಬರಗಳ ಶೋಧಕ್ಕೆ ಇಳಿದಿದೆ. ಎಸ್ಐಟಿ ಜತೆ 15 ಅರಣ್ಯ ಸಿಬ್ಬಂದಿ, ಗ್ರಾಮ ಪಂಚಾಯತ್ನ 8 ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಶೋಧಕ್ಕೆ ಇಳಿದಿದ್ರು. ಹೀಗೆ ಐದು ಕಡೆ ಮೇಲ್ಮೈನಲ್ಲೇ ಶೋಧ ನಡೆಸಿದಾಗ ತಲೆಬುರುಡೆ ಹಾಗೂ ಮೂಳೆಗಳು ಸಿಕ್ಕಿವೆ.ಒಟ್ಟಿನಲ್ಲಿ ಈ ಧರ್ಮಸ್ಥಳ ಬುರುಡೆ ಪ್ರಕರಣ ಮತ್ತೊಮ್ಮೆ ಹೊಸ ಕಥೆಯನ್ನು ಸೃಷ್ಠಿಸಿದೆ.
ಕುತೂಹಲ ಕೆರಳಿಸಿದ್ದ ಬಂಗ್ಲೆಗುಡ್ಡೆ ಕಾಡಿನ ರಹಸ್ಯ ಭೇದಿಸುವಲ್ಲಿ ಎಸ್ಐಟಿ ಯಶಸ್ವಿಯಾಗಿದೆ. ಬುಧವಾರ ಮೂರು ತಂಡಗಳಾಗಿ ಈ ಪ್ರದೇಶದಲ್ಲಿ ಎಸ್ಐಟಿ ಕರ್ಯಾಚರಣೆ ನಡೆಸಿದ್ದು ಇಲ್ಲಿನ ಐದು ಸ್ಥಳಗಳಲ್ಲಿ ಮಾನವ ಅಸ್ಥಿಪಂಜರ ಅವಶೇಷಗಳು ಪತ್ತೆಯಾಗಿವೆ. ಈ ಎಲ್ಲಾ ಅವಶೇಷಗಳು ಭೂಮಿಯ ಮೇಲ್ಮೈನ ಲ್ಲಿಯೇ ಗೋಚರಿಸಿವೆ ಎನ್ನುವುದು ವಿಶೇಷ.ಕರ್ಯಾಚರಣೆ ವೇಳೆ ಆಸುಪಾಸಿನಲ್ಲಿ ಶರ್ಟ್, ಪ್ಯಾಂಟ್, ಸೀರೆಯ ತುಂಡುಗಳು, ಊರುಗೋಲು ಹಾಗೂ ಲೈಸೆನ್ಸ್ ಪ್ರತಿಯೂ ದೊರಕಿದೆ ಎಂಬ ಮಾಹಿತಿ ಬಂದಿದ್ದು ಈ ಎಲ್ಲವನ್ನೂ ಮಹಜರು ಮೂಲಕ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಸಾಕ್ಷಿ ದೂರುದಾರ ಚಿನ್ನಯ್ಯ ಪೊಲೀಸರಿಗೆ ತಂದೊಪ್ಪಿಸಿದ್ದ ತಲೆಬುರುಡೆಯನ್ನು ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಪಕ್ಕದ ಬಂಗ್ಲೆಗುಡ್ಡೆಯ ಕಾಡಿನಿಂದ ಹೊರತೆಗೆಯಲಾಗಿತ್ತು ಎನ್ನುವುದನ್ನು ಸೌಜನ್ಯ ಮಾವ ವಿಠಲಗೌಡ ಬಹಿರಂಗ ಗೊಳಿಸಿದ್ದರು. ಅಲ್ಲದೇ ಈ ಪ್ರದೇಶದಲ್ಲಿ ಸಾಕಷ್ಟು ಮಾನವ ಅವಶೇಷಗಳು ಭೂಮಿ ಮೇಲೆ ಮತ್ತು ಒಂದೆರಡು ಅಡಿಗಳ ಅಂತರದಲ್ಲಿಯೇ ಭೂಮಿಯೊಳಗೆ ಹೂಳಲ್ಪಟ್ಟಿವೆ ಎಂಬ ಅAಶವನ್ನು ಇವರು ಗುರುತಿಸಿದ್ದರು. ಈ ಮಾಹಿತಿಯಂತೆ ಬಂಗ್ಲೆಗುಡ್ಡೆ ಪ್ರದೇಶ ದಲ್ಲಿ ಇಡೀ ದಿನ ಮಹಜರು ಕಾರ್ಯ ನಡೆಯಿತು. ಪ್ಲಾಸ್ಟಿಕ್ ಪೈಪ್, ಉಪ್ಪು , ಪ್ಲಾಸ್ಟಿಕ್ ಬಾಕ್ಸ್ಗಳು, ಸೀಲ್ಬೆ ಬಳಸುವ ಬಟ್ಟೆ ಮತ್ತು ಇನ್ನಿತರ ಪರಿಕರಗಳೊಟ್ಟಿಗೆ ಸೋಕೋ ಸಿಬ್ಬಂದಿ ಅವಶೇಷಗಳನ್ನು ವಶಕ್ಕೆ ಪಡೆದರು.
ಎಸ್ಐಟಿ ತನಿಖಾಧಿಕಾರಿ ಎಸ್ಪಿ ಜಿತೇಂದ್ರ ದಯಾಮ ನೇತೃತ್ವದ ತಂಡ, ಅರಣ್ಯ ಅಧಿಕಾರಿ, ಸಿಬ್ಬಂದಿ ವರ್ಗ, ಮೆಟಲ್ ಡಿಟೆಕ್ಟರ್ ತಂಡ ಸ್ಥಳದಲ್ಲಿತ್ತು. ಅರಣ್ಯ ಇಲಾಖೆ ಅನುಮತಿಯನ್ವಯ ನೇತ್ರಾವತಿ ಸ್ನಾನಘಟ್ಟದ ಬಳಿಯ ಅರಣ್ಯ ಪ್ರವೇಶದಿಂದ ತಂಡ ಶೋಧ ಆರಂಭಿಸಿದೆ. ಸುಮಾರು 12 ಎಕರೆ ವಿಸ್ತೀರ್ಣದಲ್ಲಿರುವ ಬಂಗ್ಲೆಗುಡ್ಡೆ ಅರಣ್ಯವನ್ನು ಎಸ್ಐಟಿ ಪೂರ್ಣ ಶೋಧಿಸಲಿದೆ ಎನ್ನುವ ಮಾಹಿತಿ ಬಂದಿದೆ.
ಸೌಜನ್ಯ ಮಾವ ವಿಠಲಗೌಡರ ಸಹೋದರ ಪುರಂದರ ಗೌಡ ಹೈಕೋರ್ಟ್ ಗೆ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಬಂಗ್ಲೆಗುಡ್ಡದ ಬಗ್ಗೆ ಉಲ್ಲೇಖಿಸಿದ್ದರು. ಈ ಹಿನ್ನೆಲೆಯಲ್ಲಿ ಎಸ್ಐಟಿ ಅವಶೇಷಗಳ ಮಹಜರು ನಡೆಸಿದೆ. ಕೋರ್ಟ್ ನೋಟೀಸ್ ಜಾರಿಮಾಡಿದ ಬಳಿಕ ಎಸ್ಐಟಿ ಚುರುಕುಗೊಂಡಿತ್ತು. ಸೆ. 18ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಕೆಯಾಗಬೇಕಿದ್ದು ಈ ಹಿನ್ನೆಲೆಯಲ್ಲಿ ಈ ಪ್ರದೇಶದ ವಸ್ತುಸ್ಥಿತಿಯನ್ನು ಎಸ್ಐಟಿ ಗಮನಿಸಿದೆ.