Sunday, July 13, 2025
Flats for sale
Homeಜಿಲ್ಲೆಬೆಂಗಳೂರು : ಮಂಗಳೂರು ಕೇಂದ್ರ ಕಾರಾಗೃಹ ಶೀಘ್ರದಲ್ಲೇ ಬಂಟ್ವಾಳಕ್ಕೆ ಸ್ಥಳಾಂತರ : ಗೃಹ ಸಚಿವ ಡಾ.ಜಿ.ಪರಮೇಶ್ವರ್..!

ಬೆಂಗಳೂರು : ಮಂಗಳೂರು ಕೇಂದ್ರ ಕಾರಾಗೃಹ ಶೀಘ್ರದಲ್ಲೇ ಬಂಟ್ವಾಳಕ್ಕೆ ಸ್ಥಳಾಂತರ : ಗೃಹ ಸಚಿವ ಡಾ.ಜಿ.ಪರಮೇಶ್ವರ್..!

ಬೆಂಗಳೂರು : ಒಂದಲ್ಲ ಒಂದು ರೀತಿಯಲ್ಲಿ ಖ್ಯಾತಿ ಪಡೆದುಕೊಂಡಿದ್ದ ಮಂಗಳೂರಿನ ಕೇಂದ್ರ ಕಾರಾಗೃಹವನ್ನು ಅದಷ್ಟು ಶೀಘ್ರದಲ್ಲೇ ಬಂಟ್ವಾಳ ತಾಲೂಕಿನ ಇರಾ ಬಳಿ ಸ್ಥಳಾಂತರ ಮಾಡಲಾಗಿವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ವಿಧಾನಪರಿಷತ್ ನಲ್ಲಿ ತಿಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಐವಾನ್ ಡಿಸೋಜಾ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು ಬಂಟ್ವಾಳ ಬಳಿ ನಿರ್ಮಾಣಗೊಳ್ಳುತ್ತಿರುವ ಕೇಂದ್ರ ಕಾರಾಗೃಹ ಕಾಮಗಾರಿಯನ್ನು ಅದಷ್ಟು ಶೀಘ್ರ ಪೂರ್ಣಗೊಳಿಸಿ ಸ್ಥಳಾಂತರ ಮಾಡಲಾಗುವುದು ಎಂದು ಹೇಳಿದರು.

ಮಂಗಳೂರು ಮದ್ಯಭಾಗದ ಕಾರಾಗೃಹದಲ್ಲಿ ಕೈದಿಗಳ ಸಂಖ್ಯೆ ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ,ಕೆಲವರನ್ನು ಬೇರೆ ಜೈಲುಗಳಿಗೆ ಸ್ಥಳಾಂತರ ಮಾಡಲಾಗಿದೆ ಎಂದು ತಿಳಿಸಿದರು. ಮಂಗಳೂರು ಕಾರಾಗೃಹದಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

Most Popular