ಬೆಂಗಳೂರು ; ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತಿರ್ಣವಾದ ಹಿನ್ನೆಲೆ ಮನನೊಂದು ವಿಧ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ
ನೆಲಮಂಗಲ ತಾಲೂಕಿನ ಯರಮಂಚನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ವಿಧ್ಯಾರ್ಥಿಯನ್ನು ಶರತ್ (18) ಎಂದು ತಿಳಿಯಲಾಗಿದೆ.
ನೆಲಮಂಗಲ ನಗರದ ಜ್ಯೂನಿಯರ್ ಕಾಲೇಜಿನಲ್ಲಿ ಪರೀಕ್ಷೆ ಬರೆದಿದ್ದು ಇಂದು ರಾಜ್ಯಾದ್ಯಂತ ರಿಸಲ್ಟ್ ಪ್ರಕಟವಾಗಿತ್ತು. ಪರೀಕ್ಷೆ ಯಲ್ಲಿ ಫೇಲ್ ಆದ ಕಾರಣ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆಂದು ತಿಳಿದುಬಂದಿದೆ.
ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ,ತನಿಖೆ ನಡೆಯುತ್ತಿದೆ.


