Friday, March 13, 2026
Flats for sale
Homeಜಿಲ್ಲೆಪುತ್ತೂರು: ರಸ್ತೆಗೆ ಉರುಳಿದ ಬೃಹದಾಕಾರದ ಬಂಡೆಕಲ್ಲು,ತಪ್ಪಿದ ಬಾರಿ ದುರಂತ.

ಪುತ್ತೂರು: ರಸ್ತೆಗೆ ಉರುಳಿದ ಬೃಹದಾಕಾರದ ಬಂಡೆಕಲ್ಲು,ತಪ್ಪಿದ ಬಾರಿ ದುರಂತ.

ಪುತ್ತೂರು : ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುವ ಭಾರಿ ಮಳೆಗೆ ಅಲ್ಲಲ್ಲಿ ಗುಡ್ಡ ಬೆಟ್ಟಗಳು ಕುಸಿದ ಪರಿಣಾಮ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ನಡುವಿನ ಪ್ರಯಾಣ ಕಡಿತಗೊಳ್ಳುತ್ತಿದೆ. ಇಂದು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್‌ ದೇವಸ್ಥಾನದ ಮೇಲಿನ ಭಾಗದ ದೊಡ್ಡ ಬಂಡೆಯೊಂದು ಶನಿವಾರ ರಸ್ತೆಗೆ ಉರುಳಿದೆ. ಅದೃಷ್ಟವಶಾತ್, ಆ ಸಮಯದಲ್ಲಿ ಯಾವುದೇ ವಾಹನಗಳು ಅಥವಾ ಪಾದಚಾರಿಗಳು ಇಲ್ಲದ ಕಾರಣ ಯಾವುದೇ ಹಾನಿ ಸಂಭವಿಸಿಲ್ಲ.

ಕೂಡಲೇ ಪೊಲೀಸರು ಸಂತ್ರಸ್ತ ಭಾಗದಲ್ಲಿ ಸಂಚಾರ ನಿರ್ಬಂಧಿಸಿದ್ದು ಕ್ರೇನ್ ಬಳಸಿ ಬಂಡೆಕಲ್ಲನ್ನು ರಸ್ತೆಯಿಂದ ಹೊರತೆಗೆದಿದ್ದಾರೆ. ಅದೇ ದಿನ ಸಾಮಾನ್ಯ ಸಂಚಾರವನ್ನು ಪುನರಾರಂಭಿಸಲಾಯಿತು.ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯವರು ಮಳೆಗಾಲದಲ್ಲಿ ಜಾಗರೂಕರಾಗಿ ಸಂಚರಿಸುವಂತೆ ಸೂಚನೆ ನೀಡಿದ್ದು ಪ್ರವಾಸದ ಯೋಜನೆಗಳನ್ನು ಕಡಿತ ಗೊಳಿಸಲು ಸೂಚಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular