ಪುತ್ತೂರು: ಪುತ್ತೂರು ನಗರದ ತೆಂಕಿಲದ ವಿವೇಕಾನಂದ ಶಿಕ್ಷಣ ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಇಸ್ರೋ ವಿಜ್ಞಾನಿಗಳ ತಂಡ ಶುಕ್ರವಾರ ರಾತ್ರಿ ಪೂಜೆಯ ವೇಳೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಪಡೆದರು.
ಚಂದ್ರಯಾನ 2 ಉಡ್ಡಯನ ಸಂಧರ್ಭದಲ್ಲಿ ಆಡಳಿತವರ್ಗ ಭಕ್ತಾದಿ ಗಳು ಸೇರಿ ಮಹಾಲಿಂಗೇಶ್ವರನ ಸನ್ನಿಧಾನದಲ್ಲಿ ಪ್ರಾರ್ಥನೆ ಸಲ್ಲಿಸಿರುವ ಬಗ್ಗೆ ಅವರಿಗೆ ತಿಳಿಸಲಾಯಿತು.ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು ಎಲ್ಲದಕ್ಕೂ ದೇವರೇ ಕಾರಣ ,ಇದೆಲ್ಲ ಅವರ ಮಹಿಮೆ ಎಂದು ಹೇಳಿದರು.


